![ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ತಂದೆ ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ತಂದೆ](https://lh3.googleusercontent.com/-l8-G6sGph_g/Yq2x4XCEZFI/AAAAAAAAPls/UJ9D4sshUJ4vgGA_QY4p5_uTRh3UIHd-gCNcBGAsYHQ/s1600/1655550430181730-0.png)
ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ತಂದೆ
Saturday, June 18, 2022
ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ಹತ್ಯೆಗೈದ ತಂದೆಯೋರ್ವನು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಕೇರ್ವಾಶೆಯಲ್ಲಿ ನಡೆದಿದೆ.
ಪಾಚರಬೆಟ್ಟು ಕೃಷ್ಣ ಪೂಜಾರಿ, ಅವರ ಪುತ್ರ ದೀಪೇಶ್(26) ಮೃತಪಟ್ಟ ದುರ್ದೈವಿಗಳು.
ಕೃಷ್ಣ ಪೂಜಾರಿಯವರ ಪತ್ನಿ ಅನಾರೋಗ್ಯ ಪೀಡಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದರು. ಈ ವೇಳೆ ತಂದೆ ಹಾಗೂ ಮಗ ಇಬ್ಬರೇ ಇದ್ದರು. ಪುತ್ರ ವಿಕಲಚೇತನನೆಂಬ ವಿಚಾರದಲ್ಲಿ ಮನನೊಂದಿದ್ದ ಕೃಷ್ಣ ಪೂಜಾರಿ ಮೊದಲಿಗೆ ಆತನನ್ನು ಬಾವಿಗೆ ತಳ್ಳಿದ್ದಾರೆ. ಆ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ.