-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಜೇಬಿನಿಂದ ಹಣ ಕದ್ದಿರುವ ಶಂಕೆ: ತಂದೆಯೇ ಪುತ್ರನ ಕಡಿದು ನೆತ್ತರು ಹರಿಸಿದ

ಜೇಬಿನಿಂದ ಹಣ ಕದ್ದಿರುವ ಶಂಕೆ: ತಂದೆಯೇ ಪುತ್ರನ ಕಡಿದು ನೆತ್ತರು ಹರಿಸಿದ

ನವಸರಿ(ಗುಜರಾತ್​): ಜೇಬಿನಿಂದ ಹಣ ಕದ್ದಿರುವ ಶಂಕೆಯಿಂದ 19 ವರ್ಷದ ಪುತ್ರನನ್ನು ತಂದೆಯೊಬ್ಬ ಕೊಡಲಿಯಿಂದ ಕಡಿದು ಕೊಲೆಗೈದಿರುವ ಘಟನೆ ಗುಜರಾತ್​ನ ನವಸರಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. 

ಸಾಹಿಲ್​ ಎಂಬಾತ ಕೊಲೆಯಾದ ಯುವಕ. ಭಾಗುಭಾಯ್​ ಎಂಬಾತ ಪುತ್ರನನ್ನೇ ಕೊಂದಿರುವ ತಂದೆ.

ಆಗಷ್ಟೇ ಮಂಗಳವಾರದ ಬೆಳಗು ಮೂಡಿತ್ತು. ಆದರೆ, ಅಷ್ಟರಲ್ಲಿ ಭಾಗುಭಾಯ್​ ತನ್ನ ಮನೆಯಲ್ಲಿ ಮಲಗಿದ್ದ ಪುತ್ರನ ಹತ್ಯೆಗೈದು ನೆತ್ತರು ಹರಿಸಿದ್ದ. ಈ ಬಗ್ಗೆ ಸ್ವತಃ ಭಾಗುಭಾಯ್​ ಪತ್ನಿ ಚಂಚಲ್​ಬೆನ್​ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. "ಬೆಳಗ್ಗೆ 6 ಗಂಟೆಯಾಗಿತ್ತು. ತಾನು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ನನ್ನ ಪತಿ ಭಾಗುಭಾಯ್ ಎಚ್ಚರಗೊಂಡಿದ್ದರೂ ಹಾಸಿಗೆಯಲ್ಲಿ ಮಲಗಿದ್ದ. ಪುತ್ರ ಸಾಹಿಲ್​ ಇನ್ನೂ ಮಲಗಿಕೊಂಡಿದ್ದ. ಈ ವೇಳೆಯೇ ನನಗೆ ಜೋರಾದ ಶಬ್ದವೊಂದು ಕೇಳಿತು. ನಾನು ಓಡಿ ಬಂದು ನೋಡಿದರೆ, ನನ್ನ ಗಂಡನ ಕೈಯಲ್ಲಿ ಕೊಡಲಿ ಇತ್ತು. ಆತನ ಎರಡ್ಮೂರು ಬಾರಿ ಮಗನ ಕುತ್ತಿಗೆಗೆ ಹೊಡೆದಿದ್ದ. ಇದರಿಂದ ಮಗ ಸಾಹಿಲ್​ ರಕ್ತದ ಮಡುವಿನಲ್ಲೇ ಮಲಗಿದ್ದ" ಎಂದು ತಾಯಿ ಹೇಳಿದ್ದಾರೆ.

ಆರೋಪಿ ತಂದೆ ದಿನಗೂಲಿ ಕಾರ್ಮಿಕನಾಗಿದ್ದ. ಮೃತ ಮಗ​ 10ನೇ ತರಗತಿ ಓದಿದ್ದ. ಆದರೆ, ಆತ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸದ್ಯದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಿಎಸ್​ಐ ಎಸ್​.ಎಸ್​.ಮಾಲ್​ ತಿಳಿಸಿದ್ದಾರೆ. ಈ ಬಗ್ಗೆ ಖೇರ್​ಗ್ರಾಮ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article