-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
'ಪತಿಯನ್ನು ತೊರೆದು ಬರಬೇಕು ಇಲ್ಲದಿದ್ದಲ್ಲಿ ಫೋಟೋ ವೈರಲ್ ಮಾಡುವೆ': ಸಂಕಷ್ಟಕ್ಕೊಳಗಾದ ವಿವಾಹಿತೆಯಿಂದ ಠಾಣೆಗೆ ದೂರು

'ಪತಿಯನ್ನು ತೊರೆದು ಬರಬೇಕು ಇಲ್ಲದಿದ್ದಲ್ಲಿ ಫೋಟೋ ವೈರಲ್ ಮಾಡುವೆ': ಸಂಕಷ್ಟಕ್ಕೊಳಗಾದ ವಿವಾಹಿತೆಯಿಂದ ಠಾಣೆಗೆ ದೂರು

ಶಿವಮೊಗ್ಗ: ವಿವಾಹಕ್ಕೆ ಮುನ್ನ ಯುವಕನೊಂದಿಗಿನ ಸಲುಗೆ ವಿವಾಹಿತೆಗೆ ಕಂಟಕವಾಗಿ ಪರಿಣಮಿಸಿದೆ. ಇದೀಗ ಆ ಯುವಕ ಪತಿಯನ್ನು ತೊರೆದು ತನ್ನೊಂದಿಗೆ ಬರಬೇಕು. ಇಲ್ಲದಿದ್ದಲ್ಲಿ ತಾವೀರ್ವರು  ಜೊತೆಗಿದ್ದ ಫೋಟೋಗಳನ್ನು ಪತಿಗೆ, ಕುಟುಂಬದವರಿಗೆ ಶೇರ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದಾನೆ. ಇದರಿಂದ ಬೇಸತ್ತ ಯುವತಿಯೀಗ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾಳೆ.

ಶಿವಮೊಗ್ಗದ ಈ ಯುವತಿಗೆ ಐದು ವರ್ಷಗಳ ಹಿಂದೆ ಗಿರೀಶ್ ಎಂಬಾತನ ಪರಿಚಯವಾಗಿದೆ. ಇಬ್ಬರೂ ಪರಸ್ಪರ ಆತ್ಮೀಯರಾಗಿದ್ದು, ಅದು ಸಲುಗೆಗೆ ತಿರುಗಿದೆ. ಪರಸ್ಪರ ಫೋಟೋ ವಿನಿಮಯ ಮಾಡುವಲ್ಲಿವರೆಗೆ ಹೋಗಿತ್ತು. ಆದರೆ 7ತಿಂಗಳ ಹಿಂದೆ ಯುವತಿಗೆ ಬೇರೆ ಮದುವೆಯಾಯಿತು. ಆ ಬಳಿಕ ಯುವತಿ ಬೇರೆ ಮದುವೆಯಾಗಿದ್ದರಿಂದ ಕುಪಿತನಾದ ಯುವಕ ಪತಿಯನ್ನು ತೊರೆದು ತನ್ನೊಂದಿಗೆ ಬರಬೇಕೆಂದು ಆಕೆಗೆ ಬೆದರಿಕೆಯೊಡ್ಡುತ್ತಿದ್ದಾನೆ‌. 

ಆತನೊಂದಿಗೆ ಸಲುಗೆಯಿಂದ ಇರೋದನ್ನೇ ತಪ್ಪಾಗಿ ಅರ್ಥೈಸಿಕೊಂಡ ಯುವಕ ಆಕೆ ಬೇರೆ ಮದುವೆಯಾಗಿರುವುದರಿಂದ ಈ ರೀತಿ ಮಾಡುತ್ತಿದ್ದಾನೆ ಎನ್ನಲಾಗಿದೆ. ಇದೀಗ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

Ads on article

Advertise in articles 1

advertising articles 2

Advertise under the article