-->

ಸರಿಯಾದ ಸಮಯಕ್ಕೆ ವರ ಮಂಟಪಕ್ಕೆ ಬರಲಿಲ್ಲವೆಂದು ಬೇರೆಯವನ ಕೈ ಹಿಡಿದ ವಧು

ಸರಿಯಾದ ಸಮಯಕ್ಕೆ ವರ ಮಂಟಪಕ್ಕೆ ಬರಲಿಲ್ಲವೆಂದು ಬೇರೆಯವನ ಕೈ ಹಿಡಿದ ವಧು

ಮುಂಬೈ: ಮುಹೂರ್ತದ ಸಮಯಕ್ಕೆ ಸರಿಯಾಗಿ ವರ ಬರಲಿಲ್ಲವೆಂದು ವಧು ಬೇರೊಬ್ಬನೊಂದಿಗೆ ವಿವಾಹವಾಗಿರುವ ಘಟನೆಯೊಂದು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. 

ಈ ಮದುವೆ ಸಮಾರಂಭವು ಎಪ್ರಿಲ್​ 22ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್​ ಪಂಗ್ರಾ ಗ್ರಾಮದಲ್ಲಿ. ಮದುವೆಗಾಗಿ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಸಂಜೆ 4 ಗಂಟೆಗೆ ಮದುವೆ ಮುಹೂರ್ತವಿತ್ತು. ಆದರೆ, ಮುಹೂರ್ತದ ಸಮಯವಾದರೂ ವರ ಮಾತ್ರ ಬರಲೇ ಇಲ್ಲ. ವಧು ಹಾಗೂ ಆಕೆಯ ಕುಟುಂಬ ಸಾಕಷ್ಟು ಕಾದರೂ ಮದುಮಗನ ಪತ್ತೆಯೇ ಇರಲಿಲ್ಲ. 

ಸಮಯ 8 ಗಂಟೆಯಾದರೂ ಮದುಮಗ ಮಾತ್ರ ಬರಲೇ ಇಲ್ಲ. ನೋಡುವವರೆಗೆ ನೋಡಿದ ವಧುವಿನ ತಂದೆ ಕೊನೆಗೆ ತಮ್ಮ ಸಂಬಂಧಿಕರೊಬ್ಬರೊಂದಿಗೆ ಪುತ್ರಿಯ ವಿವಾಹವನ್ನು ಅದೇ ಮಂಟಪದಲ್ಲಿ ನೆರವೇರಿಸಿದ್ದಾರೆ.

ವರನಿಗಾಗಿ 8 ಗಂಟೆಯವರೆಗೂ ಕಾದರೂ ಆತನ ಪತ್ತೆಯಿರಲಿಲ್ಲ. ಆ ಬಳಿಕ ಮದುವೆ ಮಂಟಪಕ್ಕೆ ಆಗಮಿಸಿದ ವರ ಪಾನಮತ್ತನಾಗಿದ್ದ. ತನ್ನ ಸ್ನೇಹಿತರ ಜತೆ ಸೇರಿಕೊಂಡು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿ ಮದ್ಯದ ಅಮಲಿನಲ್ಲೇ ಮಂಟಪಕ್ಕೆ ಬಂದಿದ್ದ. 4 ಗಂಟೆಯ ಬದಲು 8 ಗಂಟೆಗೆ ಬಂದಿದ್ದಲ್ಲದೆ, ನಮ್ಮೊಂದಿಗೆ ಜಗಳ ಆಡಲು ಆರಂಭಿಸಿದ. ಯಾಕೋ ಇದು ಸರಿಯಿಲ್ಲ ಅಂದುಕೊಂಡು ನಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಪುತ್ರಿಯನ್ನು ಕೊಟ್ಟು ಅದೇ ಮಂಟಪದಲ್ಲಿ ಮದುವೆ ಮಾಡಿಕೊಟ್ಟೆವು ಎಂದು ವಧುವಿನ ತಂದೆ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article