-->

ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಾಗರಹಾವು: ದೃಶ್ಯ ಕಂಡು ಪುಳಕಿತರಾದ ಭಕ್ತರು

ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಾಗರಹಾವು: ದೃಶ್ಯ ಕಂಡು ಪುಳಕಿತರಾದ ಭಕ್ತರು

ಬುಂದೇಲ್​ಖಂಡ (ಮಧ್ಯಪ್ರದೇಶ):  ವಿಜ್ಞಾನ, ತಂತ್ರಜ್ಞಾನ, ವೈದ್ಯ ವಿಜ್ಞಾನ ಯಾವ ತರ್ಕಕ್ಕೂ ಊಹೆಗೂ ನಿಲುಕದಂತಹ ಕೆಲವೊಂದು ಘಟನೆಗಳು ನಡೆಯುತ್ತಿರುತ್ತವೆ. ಇದನ್ನು ಪವಾಡ ಎನ್ನಬಹುದೇನೋ. ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಅಂಥಹದ್ದೇ ಯಾರ ಊಹೆಗೂ ನಿಲುಕದ ಘಟನೆಯೊಂದು ಮಧ್ಯಪ್ರದೇಶದ ಜಟಾಶಂಕರ ಧಾಮದಲ್ಲಿ ನಡೆದಿದೆ. 

ಜಟಾಶಂಕರ ಧಾಮದ ಬುಂದೇಲ್​ಖಂಡದ ಕೇದಾರನಾಥದಲ್ಲಿರುವ ಶಿವಧಾಮದಲ್ಲಿ ಈ ಪವಾಡವು ನಡೆದಿದೆ. ಸದಾ ಪವಾಡಗಳಿಗೆ ಖ್ಯಾತಿ ಹೊಂದಿರುವ ಶಿವಧಾಮದಲ್ಲಿ ಮೊನ್ನೆ ರಾತ್ರಿ ದೇವಸ್ಥಾನಕ್ಕೆ ಆಗಮಿಸಿರುವ ಹಾವೊಂದು ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದೆ. ಈ ಸಂಪೂರ್ಣ ದೃಶ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಶಿವಲಿಂಗದ ಸುತ್ತಲೂ ಹಾವು ಅನೇಕ ಸಲ ಪ್ರದಕ್ಷಿಣೆ ಹಾಕಿದೆ. ಈ ದೃಶ್ಯವನ್ನು ಕಂಡು ಭಕ್ತರು ಪುನೀತರಾಗಿದ್ದಾರೆ.‌ ರಾತ್ರಿ ಬೆಳಗಾಗುವುದರೊಳಗೆ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 ಈ ಕುರಿತು ಟ್ರಸ್ಟ್​ನ ಅಧೀಕ್ಷಕ ಜೆ.ಪಿ ಖರೆ ಮಾತನಾಡಿದ್ದು, ಈ ವಿಚಾರ ಹೊಸದನೇಲ್ಲ. ಈ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯುವ ದಿನ ಈ ಸರ್ಪ ಇಲ್ಲಿಗೆ ಬರುತ್ತದೆ. ಇಲ್ಲಿಯವರೆಗೂ ಯಾರಿಗೂ ಕೂಡ ಅಪಾಯವನ್ನೂ ಮಾಡಿಲ್ಲ. ನಿನ್ನೆ ರಾತ್ರಿ ಕೂಡ ಬಂದಿದೆಯಷ್ಟೇ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article