-->

'ಮಿಸ್ ಕರ್ನಾಟಕ' ಕಿರೀಟವನ್ನು ಮುಡಿಗೇರಿಸಿದ ಪುತ್ತೂರಿನ ಕಿಂಜಲ್

'ಮಿಸ್ ಕರ್ನಾಟಕ' ಕಿರೀಟವನ್ನು ಮುಡಿಗೇರಿಸಿದ ಪುತ್ತೂರಿನ ಕಿಂಜಲ್

ಮಂಗಳೂರು: ದ.ಕ.ಜಿಲ್ಲೆಯ ಮೂಡಬಿದಿರೆಯ ಕನ್ನಡ ಭವನದಲ್ಲಿ ಫೆ.20ರಂದು ನಡೆದ ರಾಜ್ಯಮಟ್ಟದ ‘ಯೂನಿಕ್ ಫ್ಯಾಶನ್’ ಮಿಸ್ಟರ್, ಮಿಸ್, ಟೀಮ್ ಕರ್ನಾಟಕ ಸೌಂದರ್ಯ ಸ್ಪರ್ಧೆಯ ‘ಮಿಸ್ ವಿಭಾಗ’ದಲ್ಲಿ ಪುತ್ತೂರಿನ ಕಿಂಜಲ್  ಪ್ರಥಮ ಸ್ಥಾನ ಪಡೆದು 'ಮಿಸ್ ಕರ್ನಾಟಕ' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.  

ದೀಪಕ್ ಶೆಟ್ಟಿ ಆಯೋಜನೆ ಮಾಡಿದ್ದ ಈ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಿಂಜಲ್ ಕಿರೀಟ ಮುಡಿಗೇರಿಸಿದ್ದಾರೆ. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಕಿಂಜಲ್ ಪುತ್ತೂರಿನ ನೂಜಿ-ತೆಂಕಿಲದ ಕೃಷ್ಣ ನಾಯ್ಕ್ ಹಾಗೂ ರಮ್ಯಾಕೃಷ್ಣ ದಂಪತಿ ಪುತ್ರಿ ಆಗಿದ್ದಾರೆ.

Ads on article

Advertise in articles 1

advertising articles 2

Advertise under the article