-->

ಮದುವೆಯಾಗಿ ಮೊದಲ ರಾತ್ರಿ ಮುಗಿಸಿ ಬೆಳ್ಳಂಬೆಳಗ್ಗೆ ವರ ಎಸ್ಕೇಪ್: ಇದೀಗ ಆತನ ಭಾರೀ ವಂಚನೆ ಬಯಲು

ಮದುವೆಯಾಗಿ ಮೊದಲ ರಾತ್ರಿ ಮುಗಿಸಿ ಬೆಳ್ಳಂಬೆಳಗ್ಗೆ ವರ ಎಸ್ಕೇಪ್: ಇದೀಗ ಆತನ ಭಾರೀ ವಂಚನೆ ಬಯಲು

ಅಡೂರು: ವಿವಾಹವಾಗಿ ವಧುವಿನ ಮನೆಯಲ್ಲಿ ಮೊದಲ ರಾತ್ರಿಯನ್ನು ಮುಗಿಸಿ ಚಿನ್ನಾಭರಣ ಹಾಗೂ ಹಣ ಕದ್ದು ಪರಾರಿಯಾಗಿದ್ದ ವರನನ್ನು ಕೇರಳದ ಅಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 30 ಸವರನ್​ ಚಿನ್ನ ಮತ್ತು 2.75 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಕೇರಳದ ಕಾಯಂಕುಲಂ ನಿವಾಸಿ ಅಝರುದ್ದೀನ್​ ರಶೀದ್​ (30) ಎಂಬಾತ ಬಂಧಿತ ಆರೋಪಿ.    

ಅಝರುದ್ದೀನ್​ ಪಹಕುಲಂ ನಿವಾಸಿ ಯುವತಿಯನ್ನು ಜ.30ರಂದು ಎಸ್​.ಎಚ್​. ಆಡಿಟೋರಿಯಂನಲ್ಲಿ ವಿವಾಹವಾಗಿದ್ದ. ಅದೇ ದಿನ ಸಂಪ್ರದಾಯದಂತೆ ವಧುವಿನ ಮನೆಯಲ್ಲಿ ಮೊದಲ ರಾತ್ರಿ ನಡೆದಿತ್ತು. ಆದರೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಸ್ನೇಹಿತನಿಗೆ ಅಪಘಾತವಾಗಿದೆ ಎಂದು ಅಝರುದ್ದೀನ್​ ಮನೆ ಬಿಟ್ಟಿದ್ದಾನೆ. 

ಆ ಬಳಿಕ ಆತನಿಗೆ ಫೋನ್​ ಮಾಡಿದರೆ ಸ್ವಿಚ್​ ಆಫ್​ ಆಗಿದೆ ಎಂದು ಬರುತ್ತಿತ್ತು. ಅಲ್ಲದೆ ವಧುವಿನ ಮನೆಯಲ್ಲಿ 30 ಸವರನ್​ ಚಿನ್ನ ಮತ್ತು 2.75 ಲಕ್ಷ ರೂ. ಹಣ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಇದರಿಂದ ಅನುಮಾನಗೊಂಡ ವಧುವಿನ ಮನೆಯವರು ತಕ್ಷಣ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಡೂರು ಪೊಲೀಸರಿಗೆ ಆರೋಪಿ ಅಝರುದ್ದೀನ್​ ಬಗ್ಗೆ ಸ್ಫೋಟಕ ಮಾಹಿತಿಯೊಂದು ತಿಳಿಯುತ್ತದೆ.

ಈತ ಎರಡು ವರ್ಷಗಳ ಹಿಂದೆ ಅಲಪ್ಪುಳದ ಚೆಪ್ಪಾಡ್​​ ಎಂಬಲ್ಲಿನ ಯುವತಿಯೊಬ್ಬಳನ್ನು‌ ಮದುವೆಯಾಗಿದ್ದ. ಇದೀಗ ಆತ ಮೊದಲ ಪತ್ನಿಯೊಂದಿಗೆ ಇದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ತಿಳಿಯುತ್ತದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದು, ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article