-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ದತ್ತು ಕೇಂದ್ರದ ಎದುರು ತಾಯಿಯ ಧರಣಿ: ಪ್ರಕರಣಕ್ಕೆ ಟ್ವಿಸ್ಟ್ ಹೆತ್ತವರಿಗೆ ಮದುವೆ ಮಾಡಿಸಿದ ಕಂದ

ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ದತ್ತು ಕೇಂದ್ರದ ಎದುರು ತಾಯಿಯ ಧರಣಿ: ಪ್ರಕರಣಕ್ಕೆ ಟ್ವಿಸ್ಟ್ ಹೆತ್ತವರಿಗೆ ಮದುವೆ ಮಾಡಿಸಿದ ಕಂದ

ತಿರುವನಂತಪುರ: ಕೇರಳ ರಾಜ್ಯದ ಅವಿವಾಹಿತೆಯಾಗಿದ್ದ ಅನುಪಮಾ ಎಂಬಾಕೆ 2020ರ ಅಕ್ಟೋಬರ್ 19ರಂದು ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದರು. ಅಜಿತ್‌ ಎಂಬುವವರ ಪ್ರೀತಿಯ ಫಲವಾಗಿ ಈ ಮಗುವಿನ ಜನನವಾಗಿತ್ತು. ಇಬ್ಬರೂ ಮದುವೆಯಾಗುವ ಆಲೋಚನೆಯಲ್ಲಿದ್ದರು. ಆದರೆ ಇದು ಆಕೆಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. 

ಅನುಪಮಾರಿಗೆ ಅಕ್ಕ ಇದ್ದು, ಆಕೆಯ ಮದುವೆ ಆಗುವವರೆಗೂ ತಂಗಿಯ ಮದುವೆ ಮಾಡುವುದಿಲ್ಲ ಎನ್ನುವುದು ಪಾಲಕರ ಹಠವಾಗಿತ್ತು. ಈ ನಡುವೆಯೇ ಅನುಪಮಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಹುಟ್ಟುತ್ತಲೇ ಅನುಪಮಾ ಗಮನಕ್ಕೆ ಬಾರದಂತೆ ಆಕೆಯ ಹೆತ್ತವರು ಮಗುವನ್ನು ದತ್ತು ನೀಡಿದ್ದರು. ಕೇರಳದ ದತ್ತುಕೇಂದ್ರದ ಮೂಲಕವೇ ಈ ದತ್ತು ಪ್ರಕ್ರಿಯೆ ನಡೆದಿತ್ತು. 

ಆದರೆ ಆ ಬಳಿಕ ಅವರು ಮಗು ಹುಟ್ಟುತ್ತಲೇ ಅದು ಅಪಹರಣಕ್ಕೊಳಗಾಗಿತ್ತು ಎಂದು ಅನುಪಮಾರನ್ನು ಹೆತ್ತವರು ನಂಬಿಸಲು ಯತ್ನಿಸಿದ್ದರು. ಈ ಮಗುವನ್ನು ಆಂಧ್ರಪ್ರದೇಶದ ದಂಪತಿ ಪಡೆದುಕೊಂಡಿದ್ದರು. ಆದರೆ ಈ ಮಾತಿನ ಮೇಲೆ ಅನುಪಮಾ ಮತ್ತು ಅಜಿತ್‌ ಅವರಿಗೆ ನಂಬಿಕೆಯಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ ಮಗುವನ್ನು ದತ್ತುಕೇಂದ್ರದ ಮೂಲಕ ದತ್ತುಕೊಟ್ಟಿರುವುದು ತಿಳಿದು ಬಂದಿತ್ತು. ಇದಾಗುವ ಹೊತ್ತಿಗೆ ಕೆಲವು ತಿಂಗಳುಗಳೇ ಕಳೆದಿತ್ತು. ಇದರಿಂದ ಸುಮ್ಮನೆ ಕುಳಿತುಕೊಳ್ಳದ ಅನುಪಮಾ ದತ್ತು ಕೇಂದ್ರದ ಮುಂದೆ ಹಲವಾರು ದಿನಗಳ ಕಾಲ ಧರಣಿ ಕುಳಿತೇ ಬಿಟ್ಟರು.

ಈ ವಿಷಯ ಮಕ್ಕಳ ಕಲ್ಯಾಣ ಆಯೋಗದವರೆಗೂ ಹೋಯಿತು. ಅಲ್ಲಿ ಈ ಬಗ್ಗೆ ವಿಚಾರಣೆ ನಡೆದು ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು ದತ್ತುಕೇಂದ್ರಕ್ಕೆ ಆಯೋಗ ನಿರ್ದೇಶನ ಮಾಡಿತ್ತು. ಬಳಿಕ ಅಧಿಕಾರಿಗಳು ಆಂಧ್ರಪ್ರದೇಶಕ್ಕೆ ತೆರಳಿ ಮಗುವನ್ನು ವಾಪಸ್‌ ತಂದಿದ್ದಾರೆ. ಆ ಬಳಿಕ ಮಗು ಇವರದ್ದೇ ಹೌದೋ ಅಲ್ಲವೋ ಎಂಬುದಕ್ಕೆ ಡಿಎನ್‌ಎ ತಪಾಸಣೆಯನ್ನೂ ನಡೆಸಲಾಯಿತು. ಮಗು ಈ ಅನುಪಮಾ - ಅಜಿತ್ ರದ್ದೇ  ಎಂದು ತಿಳಿದುಬಂದಿದ್ದರಿಂದ ಮಗುವನ್ನು ಅಮ್ಮನ ತೆಕ್ಕೆಗೆ ನೀಡಲಾಗಿದೆ. ಇವಿಷ್ಟೂ ಈ ಜೋಡಿಯ ಕಥೆ. 

ಇದೀಗ ಇದಕ್ಕೊಂದು ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದೆ. ಅದೇನೆಂದರೆ ಈ ಪುತ್ರ ಹೆತ್ತವರ ಮಡಿಲು ಸೇರುತ್ತಲೇ ಅವರಿಬ್ಬರ ಮದುವೆಯನ್ನೂ ಮಾಡಿಸಿದ್ದಾನೆ. ಇಲ್ಲಿನ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಗುವಿನ ಸಮ್ಮುಖದಲ್ಲಿ ಅನುಪಮಾ - ಅಜಿತ್ ವಿವಾಹ ನೆರವೇರಿದೆ. ಅನುಪಮಾ ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮಾಜಿ ಕಾರ್ಯಕರ್ತೆಯಾಗಿದ್ದು, ಅಜಿತ್ ಸಿಪಿಐ(ಎಂ) ಯುವ ಘಟಕವಾದ ಡಿವೈಎಫ್‌ಐನ ಸ್ಥಳೀಯ ನಾಯಕರಾಗಿದ್ದರು. 

Ads on article

Advertise in articles 1

advertising articles 2

Advertise under the article

ಸುರ