-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪ್ರೀತಿಸಿದ ಹುಡುಗಿಗೆ ಹೀಗಾ ಮಾಡೋದು? ಲಾಡ್ಜ್ ನಲ್ಲಿ ಕೂಡಿ ಹಾಕಿ...

ಪ್ರೀತಿಸಿದ ಹುಡುಗಿಗೆ ಹೀಗಾ ಮಾಡೋದು? ಲಾಡ್ಜ್ ನಲ್ಲಿ ಕೂಡಿ ಹಾಕಿ...


ಉತ್ತರ ಕನ್ನಡ : ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ಪ್ರೀತಿಸುತ್ತಿದ್ದ ಯುವಕನೆ ಆಕೆಯ ಚಿನ್ನಾಭರಣ ಕದ್ದೊಯ್ದ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ಈತ ಪ್ರವಾಸಕ್ಕೆ ಕರೆತಂದಿದ್ದ . ಆಕೆಯನ್ನು ಲಾಡ್ಜ್ ನ  ರೂಮಿನಲ್ಲಿ ಕೂಡಿ ಹಾಕಿ ಚಿನ್ನಾಭರಣ , ಮೊಬೈಲ್ ಮತ್ತು ಬ್ಯಾಗ್ ಜೊತೆಗೆ ಪರಾರಿಯಾಗಿದ್ದಾನೆ . 


ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಮಹಿಳೆ ಮತ್ತು ಪುಣೆ ಮೂಲದ ವ್ಯಕ್ತಿ ನಡುವಿನ ಪರಿಚಯ ಪ್ರೇಮಕ್ಕೆ ತಿರುಗಿದ ಬಳಿಕ ನಡೆದ ಘಟನೆಯಿದು . ಆಕೆಯನ್ನು ಮದುವೆ ಆಗುವುದಾಗಿ ಸಹ ಆತ ನಂಬಿಸಿದ್ದನು . 

ಬುಧವಾರ ಇವರು ಪ್ರವಾಸಕ್ಕೆ ಬಂದಿದ್ದು ಗೋಕರ್ಣದ ರಥಬೀದಿಯ ಲಾಡ್ಜ್ ನಲ್ಲಿ ಕೊಠಡಿ ಬಾಡಿಗೆ ಪಡೆದು ವಾಸವಿದ್ದರು . ರಾತ್ರಿ  ಮದ್ಯಪಾನ ನಶೆಯಲ್ಲಿ ಮಹಿಳೆ ಮಲಗಿದ ವೇಳೆ ಆಕೆಯ ಹತ್ತಿರವಿದ್ದ 1.52  ಲಕ್ಷ ರೂ . ಮೌಲ್ಯದ 35 ಗ್ರಾಂ ತೂಕದ ಮಂಗಳಸೂತ್ರ , ಎರಡು ಕಿವಿ ಓಲೆ , 15 ಸಾವಿರ ರೂಪಾಯಿ ನಗದು , ಮೊಬೈಲ್ ಫೋನ್ ಇದ್ದ ಬ್ಯಾಗ್ ಅನ್ನು ಕದ್ದೋಯ್ದಿದ್ದಾನೆ.   ಕೊಠಡಿ ಬೀಗ ಹಾಕಿ ಈತ ಪರಾರಿಯಾಗಿದ್ದಾನೆ.

Ads on article

Advertise in articles 1

advertising articles 2

Advertise under the article

ಸುರ