-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಡಬ: ಬೇಟೆಗೆಂದು ಬಂದು ಕೋಳಿಯ ಜೊತೆಗೆ ಬಾವಿಗೆ ಬಿತ್ತು ಚಿರತೆ; ಅರಣ್ಯ ಅಧಿಕಾರಿಗಳಿಂದ ರಕ್ಷಣೆ

ಕಡಬ: ಬೇಟೆಗೆಂದು ಬಂದು ಕೋಳಿಯ ಜೊತೆಗೆ ಬಾವಿಗೆ ಬಿತ್ತು ಚಿರತೆ; ಅರಣ್ಯ ಅಧಿಕಾರಿಗಳಿಂದ ರಕ್ಷಣೆ

ಕಡಬ: ಕೋಳಿಯನ್ನು ಹಿಡಿಯಲು ಹೋಗಿರುವ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬದ ಕೊಂಬಾರು ಕಮರ್ಕಜೆಯಲ್ಲಿ ರವಿವಾರ ನಡೆದಿದೆ.

ರಾಮಯ್ಯ ಎಂಬವರ ಮನೆಯ‌ ಬಳಿ ಕೋಳಿ ಹಿಡಿಯುವ ಪ್ರಯತ್ನದಲ್ಲಿದ್ದ ಚಿರತೆಯುವ ಅಚಾನಕ್ಕಾಗಿ ಕೋಳಿಯ ಸಮೇತ ಅವರ ಮನೆಯ ಬಾವಿಗೆ ಬಿದ್ದಿದೆ. ಘಟನೆಯಲ್ಲಿ ಕೋಳಿ ಸಾವನ್ನಪ್ಪಿದೆ. ಆದರೆ ಬಾವಿಗೆ ಬಿದ್ದ ಚಿರತೆಯು ಹೊರ ಬರಲಾರದೆ ಚಡಪಡಿಸುತ್ತಿತ್ತು.

ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಮಾಡಿ ಚಿರತೆಯನ್ನು ರಕ್ಷಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಈ ಪ್ರದೇಶದಿಂದ ಅನತಿ ದೂರದಲ್ಲಿ ಚಿರತೆಯೊಂದು ರಕ್ಷಣಾ ಕಾರ್ಯದ ಮತ್ತೆ ತಪ್ಪಿಸಿಕೊಂಡು ಓಡಿತ್ತು ಎಂಬುದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article