-->

Alvas - National Naturopathy day - ಆಳ್ವಾಸ್‍ನಲ್ಲಿ 4ನೇ ರಾಷ್ಟ್ರೀಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

Alvas - National Naturopathy day - ಆಳ್ವಾಸ್‍ನಲ್ಲಿ 4ನೇ ರಾಷ್ಟ್ರೀಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

ಆಳ್ವಾಸ್‍ನಲ್ಲಿ 4ನೇ ರಾಷ್ಟ್ರೀಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

ತೀರಾ ಅಗತ್ಯದ ಸಂದರ್ಭದಲ್ಲಿ ಮಾತ್ರ ಇಂಗ್ಲಿಷ್ ಔಷಧಿಗೆ ಮೊರೆ ಹೋಗಿ. ಉಳಿದ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮ ಉಂಟು ಮಾಡದ ನ್ಯಾಚುರೋಪಥಿ ವೈದ್ಯಕೀಯ ಸೇವೆ ಪಡೆಯುವುದು ಆರೋಗ್ಯಕ್ಕೆ ಉತ್ತಮ ಎಂದು ಮಂಗಳೂರಿನ ಬೃಂದಾವನ ನೇಚರ್ ಕ್ಯೂರ್ ಹಾಗೂ ಯೋಗ ಕ್ಲಿನಿಕ್‌ನ ಹಿರಿಯ ನ್ಯಾಚುರೋಪಥಿ ವೈದ್ಯೆ ಡಾ. ಶಾರದಾ ಬಂಗೇರ ಹೇಳಿದರು.





ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್, ಭಾರತ ಸರಕಾರದ ಆಯುಷ್ ಇಲಾಖೆ ಹಾಗೂ ಪುಣೆಯ ನ್ಯಾಶನಲ್ ಇನ್ಟಿಟ್ಯೂಟ್ ಆಫ್ ನ್ಯಾಚುರೋಪಥಿಯ ಸಂಯುುಕ್ತ ಆಶ್ರಯದಲ್ಲಿ “ರೋಗ ಮುಕ್ತ ಭಾರತ” ಧ್ಯೇಯದೊಂದಿಗೆ 4ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನು ಆಳ್ವಾಸ್ ಕಾಲೇಜಿನ ಮಿಜಾರ್ ಕ್ಯಾಂಪಸ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.






ವೈದ್ಯಕೀಯ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಂಡು ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿರುವ ಜಂಕ್ ಮಾಹಿತಿಗಳನ್ನು ಅನುಸರಿಸದೇ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಕೊಳ್ಳಬೇಕೆಂದು ಅವರು ಕರೆ ನೀಡಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, "ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕಣ್ಣಿಗೆ ಕಾಣದ, ಅಗೋಚರವಾದ ವಿಷಯಗಳ ಬಗ್ಗೆ ಚಿಂತಿಸುವ ಬದಲು ನಮಗೆ ಲಭ್ಯವಿರುವ ವಿಷಯಗಳ ಕುರಿತು ವಿಶೇಷ ಜ್ಞಾನ ಗಳಿಸಿದಾಗ ಖಂಡಿತ ಯಶಸ್ಸು ಸಾಧ್ಯವಾಗುತ್ತದೆ" ಎಂದು ಕರೆನೀಡಿದರು.



ಆಳ್ವಾಸ್ ಕಾಲೇಜಿನ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು ಪ್ರಾಂಶುಪಾಲೆ ಡಾ. ವನಿತಾ ಎಸ್. ಶೆಟ್ಟಿ ಸ್ವಾಗತಿಸಿದರು.



ಉಪನ್ಯಾಸಕ ಡಾ. ನಿತೇಶ್ ವರದಿ ವಾಚಿಸಿದರು, ಡಾ. ಅಮೃತಾ ವಂದಿಸಿದರು, ರುಚಿತಾ ಕಾರ್ಯಕ್ರಮ ನಿರೂಪಿಸಿದರು.



Ads on article

Advertise in articles 1

advertising articles 2

Advertise under the article