-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಭಾರತದ ವಿರುದ್ಧ ಗೆಲುವಿನ ನಗೆ ಬೀರಿದ ಪಾಕ್ ಕ್ರಿಕೆಟ್  ನಾಯಕನಿಗೆ ಸಂಕಟವಾದಳು ಈ ಯುವತಿ!

ಭಾರತದ ವಿರುದ್ಧ ಗೆಲುವಿನ ನಗೆ ಬೀರಿದ ಪಾಕ್ ಕ್ರಿಕೆಟ್ ನಾಯಕನಿಗೆ ಸಂಕಟವಾದಳು ಈ ಯುವತಿ!

ಇಸ್ಲಮಾಬಾದ್​: ಟಿ20 ವಿಶ್ವಕಪ್​ ಪಂದ್ಯದ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಜಯಭೇರಿ ಭಾರಿಸಿದ ಸಂತಸದಲ್ಲಿ ಪಾಕಿಸ್ತಾನ ತೇಲಾಡುತ್ತಿದೆ. ಅದರಲ್ಲೂ ಪಾಕ್​ ತಂಡದ ನಾಯಕ ಬಾಬರ್​ ಅಜಾಮ್​ ಬಗ್ಗೆ ಭರಪೂರ ಮೆಚ್ಚುಗೆಯ ಸುರಿಮಳೆಯೇ ಹರಿಯುತ್ತಿದೆ. ಅಲ್ಲದೆ, ಅವರನ್ನು ಹೀರೊ ಎಂಬರ್ಥದಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಈ ನಡುವೆ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬರುತ್ತಿದೆ. ಆತ ಹೀರೋ ಅಲ್ಲ ವಿಲನ್ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ. 

ಹಮೀಜಾ ಮುಕ್ತಾರ್ ಎಂಬ ಯುವತಿಯೇ ಪಾಕ್ ನಾಯಕನ ವಿರುದ್ಧ ಈ ಗಂಭೀರ ಆರೋಪ ಮಾಡಿದವಳು. ಇದೀಗ ಇಡೀ ಪಾಕ್​ನಲ್ಲಿ ಕೋಲಾಹಲ ಸೃಷ್ಟಿಸಿದೆ. ಒಂದೆಡೆ ಪಾಕ್​ ಭಾರತದ ವಿರುದ್ಧ ಗೆಲುವು ಸಾಧಿಸಿದ ವಿಜಯೋತ್ಸವದಲ್ಲಿದ್ದರೆ, ತಂಡದ ನಾಯಕನಿಗೆ ಮಾತ್ರ ಈ ಹಮೀಜಾ ಮುಕ್ತಾರ್​ ಬಿಸಿ ತಲೆನೋವಾಗಿ ಪರಿಣಮಿಸಿದ್ದಾಳೆ.

ಬಾಬರ್​ ವಿರುದ್ಧ ಆಕೆ ಸಾಕಷ್ಟು ಸಮಯಗಳ ಹಿಂದೆಯೇ ಗಂಭೀರ ಆರೋಪ ಮಾಡಿದ್ದಳು.‌ಇದೇ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತನ್ನನ್ನು ತಾನು ಬಾಬರ್​ ಗರ್ಲ್​ಫ್ರೆಂಡ್​ ಎಂದು ಹೇಳಿಕೊಂಡಿರುವ ಮುಕ್ತಾರ್​, ಆತ ನನ್ನನ್ನು ದೇಹತೃಷೆಗೆ ಬಳಸಿಕೊಂಡು ಗರ್ಭಿಣಿಯಾದ ಬಳಿಕ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆಂದು ಆರೋಪ ಮಾಡಿದ್ದಾರೆ.

ಕೆಲವರ್ಷಗಳ ಹಿಂದೆಯೇ ಬಾಬರ್​ ವಿವಾದವೊಂದಕ್ಕೆ ಸಿಲುಕಿದ್ದಾರೆ. ಅದೇ ರೀತಿ ಬಾಬರ್​ ಸುದ್ದಿಯಾದಗಲೆಲ್ಲ ಅವರ ಮೇಲಿನ ಈ ಗಂಭೀರ ಆರೋಪವೂ ಸುದ್ದಿಯಾಗುತ್ತಲೇ ಇರುತ್ತದೆ. ವಿವಾಹವಾಗುವೆನೆಂದು ನಂಬಿಸಿರುವ ಬಾಬರ್ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆಂದು ಕೈಯಲ್ಲಿ ಕುರಾನ್​ ಹಿಡಿದು ಮುಕ್ತಾರ್ ಆರೋಪಿಸಿದ್ದಾಳೆ. ಇದನ್ನು ಪಾಕ್​ ಮಾಧ್ಯಮವೊಂದರ ಸಂದರ್ಶನದಲ್ಲಿ ಮುಕ್ತಾರ್​ ಮುಕ್ತವಾಗಿ ಹೇಳಿಕೊಂಡಿದ್ದಾಳೆ.

 ಅದಲ್ಲದೆ, ಬಾಬರ್​ ವಿರುದ್ಧ ಮುಕ್ತಾರ್​ ನ್ಯಾಯಾಲಯದಲ್ಲಿ ಮೆಟ್ಟಿಲೇರಿದ್ದಾಳೆ. ಈ ಪ್ರಕರಣವನ್ನು ಹಿಂಪಡೆದುಕೊಳ್ಳಲು ಬಾಬರ್​ ಕುಟುಂಬ 20 ಲಕ್ಷ ರೂ. ಆಫರ್​ ಕೂಡಾ ನೀಡಿದೆ ಎಂದು ಮತ್ತೊಂದು ಆರೋಪ ಮಾಡಿದ್ದಾಳೆ. ಅಲ್ಲದೆ, ಹಣ ಪಡೆದುಕೊಂಡು ಹಿಂತಿರುಗಿಸದೆ ವಂಚನೆ ಮಾಡಲಾಗಿದೆ ಎಂಬ ಆರೋಪವನ್ನು ಮಾಡಿದ್ದಾಳೆ.

"ನಾನು ಹಾಗೂ ಬಾಬರ್​ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದೆವು. 2011ರಲ್ಲಿ ಇಬ್ಬರೂ ಮನೆ ಬಿಟ್ಟು ಓಡಿ ಬೇರೆಡೆ ನೆಲೆಸಿದ್ದೆವು. ಈ ಸಂದರ್ಭ ನಾವಿಬ್ಬರೂ ಲಾಹೋರ್​ನಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದೆವು. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ಹಾಗೂ ಸಾಕ್ಷಿಗಳು ನನ್ನ ಬಳಿ ಇವೆ ಎಂದು ಮುಕ್ತಾರ್​ ಹೇಳಿಕೊಂಡಿದ್ದಾರೆ. ಇದೀಗ ಬಾಬರ್​ ಹೆಸರು ಹೆಚ್ಚಾಗಿ ಕೇಳಿಬರುತ್ತಿರುವುದರಿಂದ, ಆತನ ವಿರುದ್ಧದ ಆರೋಪವೂ ಮತ್ತೆ ಚರ್ಚೆಗೆ ಗ್ರಾಸವಾಗಿದೆ. 

Ads on article

Advertise in articles 1

advertising articles 2

Advertise under the article

ಸುರ