-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನೋಟು ರದ್ದತಿ ಅರಿವಿಲ್ಲದೆ ಹಳೆಯ ನೋಟುಗಳ 65 ಸಾವಿರ ರೂ. ಸಂಗ್ರಹಿಸಿದ ಅಂಧ ಭಿಕ್ಷುಕ: ವಿನಿಮಯ ಮಾಡಲು ಕೋರಿ ಮನವಿ

ನೋಟು ರದ್ದತಿ ಅರಿವಿಲ್ಲದೆ ಹಳೆಯ ನೋಟುಗಳ 65 ಸಾವಿರ ರೂ. ಸಂಗ್ರಹಿಸಿದ ಅಂಧ ಭಿಕ್ಷುಕ: ವಿನಿಮಯ ಮಾಡಲು ಕೋರಿ ಮನವಿ

ಚೆನ್ನೈ: ತಮಿಳುನಾಡಿನ 65 ವರ್ಷ ವಯಸ್ಸಿನ ಅಂಧ, ಭಿಕ್ಷುಕರೋರ್ವರಿಗೆ ತಮ್ಮಲ್ಲಿರುವ 65 ಸಾವಿರ ರೂ.‌ ಮೊತ್ತದ ರದ್ದಾಗಿರುವ 500 ರೂ., 1000 ರೂ. ಮುಖಬೆಲೆಯ ಹಳೆಯ ನೋಟುಗಳನ್ನು ವಿನಿಮಯ ಮಾಡಬೇಕೆಂದು ಕೋರಿ ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.

ಚಿನ್ನಕಣ್ಣು ಎಂಬ ಈ ಅಂಧ ಭಿಕ್ಷುಕ ಕೃಷ್ಣಗಿರಿ ಜಿಲ್ಲೆಯ ಚಿನ್ನಗೌಂಡನೂರು ಗ್ರಾಮದವರು. ಚಿನ್ನಕಣ್ಣು ತಮ್ಮ ಐದನೇ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡಿದ್ದರು. ಇವರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಾ ಹಳ್ಳಿಯ ಗುಡಿಸಲೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಈ ವ್ಯಕ್ತಿಯು ನಿತ್ಯವೂ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ಭಿಕ್ಷೆ ಬೇಡಿ ಗಳಿಸಿ ಉಳಿತಾಯ ಮಾಡಿರುವ ಹಣ ಇದಾಗಿದೆ ಎಂದು ಅವರು ಹೇಳಿದ್ದಾರೆ. 

ಈ ಬಗ್ಗೆ ವಿವರಿಸಿರುವ ಚಿನ್ನಕಣ್ಣು,  "ನಾನು ಕಳೆದ ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದೆ.‌ ಆದ್ದರಿಂದ ನನಗೆ ನನ್ನ ಜೀವಿತಾವಧಿಯಲ್ಲಿ ಉಳಿತಾಯ ಮಾಡಿರುವ 65 ಸಾವಿರ ರೂ.‌ ಹಣವನ್ನು ಎಲ್ಲಿ ಇರಿಸಿದ್ದೆ ಎಂಬುದನ್ನೇ ಮರೆತ್ತಿದ್ದೆ. ಕೆಲವು ದಿನಗಳ ಹಿಂದೆ ಈ ಹಣ ನನಗೆ ಸಿಕ್ಕಿದೆ. ನೋಟು ರದ್ದತಿ ಆಗಿರುವುದರಿಂದ ತನ್ನ ಜೀವಿತಾವಧಿಯ ಉಳಿತಾಯ ಮೊತ್ತವನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ ಎಂದು ಬಳಿಕ ತಿಳಿದುಕೊಂಡೆ. ನನ್ನ ವೃದ್ಧಾಪ್ಯದಲ್ಲಿ ಈ ಹಣವನ್ನು ಬಳಸುವ ಭರವಸೆಯೊಂದಿಗೆ ಅದನ್ನು ಉಳಿತಾಯ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ