-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮದುವೆಯಾದ ಒಂದೇ ತಿಂಗಳಿಗೆ ಅನುಮಾನದ ಪಿಶಾಚಿ ಪತಿಯಿಂದ ದುರಂತ ಅಂತ್ಯಕಂಡಳು ಪತ್ನಿ: ಸಾಫ್ಟ್‌ವೇರ್ ಗಂಡನ ಪೈಶಾಚಿಕ ಕೃತ್ಯ!

ಮದುವೆಯಾದ ಒಂದೇ ತಿಂಗಳಿಗೆ ಅನುಮಾನದ ಪಿಶಾಚಿ ಪತಿಯಿಂದ ದುರಂತ ಅಂತ್ಯಕಂಡಳು ಪತ್ನಿ: ಸಾಫ್ಟ್‌ವೇರ್ ಗಂಡನ ಪೈಶಾಚಿಕ ಕೃತ್ಯ!

ತೆಲಂಗಾಣ: ಅನುಮಾನದ ಪಿಶಾಚಿ ಸಾಫ್ಟ್‌ವೇರ್ ಪತಿಯೋರ್ವನು ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯನ್ನು ಚೂರಿಯಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮೇಡ್ಚಲ್-ಮಲ್ಕಾಜಗಿರಿ ಜಿಲ್ಲೆಯ ಬಚುಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಕಾಮರೆಡ್ಡಿ ಜಿಲ್ಲೆಯ ತಿಮ್ಮಾಪ್ಪೂರ್​ ಗ್ರಾಮದ ಮೂಲದವಳಾದ ಸುಧಾರಾಣಿ ಕೊಲೆಯಾದ ನವವಿವಾಹಿತೆ. ಸಾಫ್ಟ್​ವೇರ್​ ಇಂಜಿನಿಯರ್​ ಪತಿ ಕಿರಣ್​ ಕುಮಾರ್​ ಕೊಲೆಗೈದ ಆರೋಪಿ.

ಮದುವೆಯಾದ ಕೇವಲ‌ 28 ದಿನಕ್ಕೆ ಆಕೆ ದುರಂತ ಅಂತ್ಯ ಕಂಡಿರೋದು ಅತ್ಯಂತ ದುರಾದೃಷ್ಟಕರ. ಸುಧಾರಾಣಿಯನ್ನು ಸಾಫ್ಟ್​ವೇರ್​ ಇಂಜಿನಿಯರ್​ ಉದ್ಯೋಗಿ ಕಿರಣ್​ ಕುಮಾರ್​ ಗೆ ವಿವಾಹ ಮಾಡಿಕೊಡಲಾಗಿತ್ತು. ಈತ ಹೈದರಾಬಾದ್​ನ ಪ್ರಗತಿ ನಗರದ ಶ್ರೀಶೈದ್ವಾರಕ ಅಪಾರ್ಟ್ಮೆಂಟ್​ನಲ್ಲಿ ಫ್ಲ್ಯಾಟ್​ ನಲ್ಲಿ ವಾಸ್ತವ್ಯವಿದ್ದನು. ಅದೇ ಮನೆಯಲ್ಲಿ ಆತ ಪತ್ನಿಯನ್ನು ಕೊಲೆಗೈದಿದ್ದ. 

ಮಗಳನ್ನು ನೋಡಲು  ಹೈದರಾಬಾದ್​ಗೆ ಬಂದ ಸುಧಾರಣಿ ಪಾಲಕರು ಶನಿವಾರ 3.30ರ ಸುಮಾರಿಗೆ ಪ್ರಗತಿ ನಗರದ ಅಳಿಯ ಅಪಾರ್ಟ್‌ಮೆಂಟ್ ಗೆ ಬಂದಿದ್ದಾರೆ. ಆದರೆ ಕಾಲಿಂಗ್ ಬೆಲ್​ ಮಾಡಿದರೂ ಯಾರೂ ಬಾಗಿಲು ತೆರೆಯದಿರುವುದನ್ನು ಕಂಡು ಮಗಳ ಮೊಬೈಲ್​ ಫೋನ್ ​ಗೆ ಕರೆ ಮಾಡಿದ್ದಾರೆ. ಆದರೆ ಮಗಳ ಕರೆ ಸ್ವೀಕರಿಸದಿರುವುದಿರುವುದರಿಂದ ಪಾಲಕರು ಅನುಮಾನಗೊಂಡು ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. 

ಪೊಲೀಸರು ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಸುಧಾರಾಣಿ ಕತ್ತು ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಳು. ಕಿರಣ್​ ಕೂಡ ಕೂಡಾ ಕತ್ತು ಸೀಳಿಕೊಂಡು ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದ. ತಕ್ಷಣ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತ್ನಿ‌ ಸುಧಾರಾಣಿಯ ಕತ್ತು, ಕಾಲು ಮತ್ತು ತೋಳುಗಳಿಗೆ​ ಚಾಕುವಿನಿಂದ ಇರಿದು ಪತಿ ಕಿರಣ್ ಕೊಲೆ ಮಾಡಿದ್ದಾನೆ.  

ಎರಡು ವಾರಗಳ ಹಿಂದಷ್ಟೇ ಈ ಅಪಾರ್ಟ್​ಮೆಂಟ್​ಗೆ ಶಿಫ್ಟ್ ಆಗಿದ್ದರು. ಆಗಿನಿಂದಲೂ ಅವರಿಬ್ಬರೂ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ, ಬೆರೆಯುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. 

ಶನಿವಾರ ಮಧ್ಯಾಹ್ನ 2 ರಿಂದ 3 ಗಂಟೆ ಸುಮಾರಿಗೆ ಸುಧಾರಾಣಿಯನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಬಳಿಕ‌ ಆಕೆಯ ಹೆತ್ತವರು ತನ್ನನ್ನು ಬಿಡುವುದಿಲ್ಲ ಎಂದು ಕಿರಣ್​ ತಾನು ಕೂಡ ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಆತನ ಸ್ಥಿತಿ ಸುಧಾರಿಸಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದು, ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಆನ್​ಲೈನ್ ಮೂಲಕ ವಿಶೇಷ ಚಾಕುವನ್ನು ಕಿರಣ್ ಕುಮಾರ್ ಖರೀದಿ ಮಾಡಿದ್ದ ಎಂಬ ಭಯಾನಕ ಮಾಹಿತಿ ಹೊರ ಬಂದಿದೆ. ಕೊಲೆಯ ಹಿಂದಿನ ದಿನ ಅದನ್ನು ಪಡೆದುಕೊಂಡಿರುವ ಕಿರಣ್​, ಅದೇ ಚಾಕುವಿನಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ತನಿಖೆ ಇನ್ನೂ ಮುಂದುವರಿದಿದ್ದು ಇನ್ನಷ್ಟು ಸ್ಪೋಟಕ ಮಾಹಿತಿ ಹೊರ ಬೀಳಲಿದೆ.

Ads on article

Advertise in articles 1

advertising articles 2

Advertise under the article

ಸುರ