ದಕ್ಷಿಣ ಕನ್ನಡ; ನೀರು ಎಂದು ಪೆಟ್ರೋಲ್ ಕುಡಿದು ಅಜ್ಜಿ ಸಾವು


ಮಂಗಳೂರು;  ನೀರು ಎಂದು  ಬಾಟಲಿಯಲ್ಲಿದ್ದ ಪೆಟ್ರೋಲ್​ ಅನ್ನು  ಕುಡಿದು ಅಜ್ಜಿಯೊಬ್ಬರು ಮೃತಪಟ್ಟ ಘಟನೆ ಉಪ್ಪಿನಂಗಡಿಯ ಪೆರ್ನೆ ಸಂಪದಕೋಡಿಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ 79 ವರ್ಷದ  ಪದ್ಮಾವತಿ ಮೃತಪಟ್ಟವರು. ಇವರು ರವಿವಾರ  ಪೆರ್ನೆಯಲ್ಲಿರುವ ಮಗಳ ಮನೆಗೆ  ಬಂದಿದ್ದರು. 

ಇಲ್ಲಿ ಮನೆಯವರು ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಬಾಟಲಿಯಲ್ಲಿ ಪೆಟ್ರೋಲ್​ ತಂದಿಟ್ಟಿದ್ದರು. ಇದನ್ನು ನೀರು ಎಂದು ಅಜ್ಜಿ ಕುಡಿದಿದ್ದಾರೆ. ಅಜ್ಜಿಯವರಿಗೆ ಕಣ್ಣಿನ ದೋಷ ಇತ್ತೆಂದು ಹೇಳಲಾಗಿದೆ.

ಪೆಟ್ರೋಲ್ ಕುಡಿದು ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

 
BREAKING NEWS
Loading latest news...
Join our WhatsApp Channel Powered By : Online Pudu