ಮುಂಬಯಿ; ಕಾರು ಮತ್ತು ಆಟೋ ಮಧ್ಯೆ ಮುಖಾಮುಖಿ ಡಿಕ್ಕಿ ನಡೆದು ಒಂದೇ ಕುಟುಂಬದ ಮೂವರು ಸಹಿತ ನಾಲ್ವರು ಸಾವನ್ನಪ್ಪಿದ ಘಟನೆ ಮುಂಬಯಿ ಠಾಣೆಯ ಅಂಬರ್ನಾಥ ತಾಲೂಕಿನ ಪಾಲೇಗಾಂವ್ನ ರಸ್ತೆಯಲ್ಲಿ ನಡೆದಿದೆ.
ಭೀಕರ ರಸ್ತೆ ಅಪಘಾತದಲ್ಲಿ ವರ್ಷ ವಾಲೆಚಾ (51), ಆರತಿ ವಾಲೆಚಾ (41), ರಾಜ್ ವಾಲೆಚಾ (12) ಮತ್ತು ರಿಕ್ಷಾ ಚಾಲಕ ವಿಠ್ಠಲ್ ಶಿಂಧೆ ಸಾವನ್ಬಪ್ಪಿದ್ದಾರೆ. ಅಟೋ ಗೆ ಎದುರುಬದಿಯಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರ ಮೃತದೇಹವನ್ನು ಮುಂಬಯಿಯ ಉಲ್ಲಾಸ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ.
