-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Nazir Sab Statue unveiled- ಐದೇ ನಿಮಿಷ ನಡೆದ ನಜೀರ್ ಸಾಬ್ ಪ್ರತಿಮೆ ಅನಾವರಣ ಕಾರ್ಯ: ಸಚಿವರ ಗುಟ್ಟಾದ ಕಾರ್ಯಕ್ರಮ?

Nazir Sab Statue unveiled- ಐದೇ ನಿಮಿಷ ನಡೆದ ನಜೀರ್ ಸಾಬ್ ಪ್ರತಿಮೆ ಅನಾವರಣ ಕಾರ್ಯ: ಸಚಿವರ ಗುಟ್ಟಾದ ಕಾರ್ಯಕ್ರಮ?


ಗ್ರಾಮೀಣಾಭಿವೃದ್ಧಿಯ ಹರಿಕಾರ ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್ ಅವರ ಪ್ರತಿಮೆ ಕೊನೆಗೂ ಸ್ಥಾಪನೆಯಾಗಿದೆ. ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ (ANSSIRD & PR)ಯ ಆವರಣದಲ್ಲಿ ಈ ಪ್ರತಿಮೆ ಸ್ಥಾಪನೆಯಾಗಿದೆ.



ರಾಜ್ಯದ ಎಲ್ಲ ನಗರದ ಬೀದಿ ಬೀದಿಗೂ ನಳ್ಳಿ ನೀರಿನ ಸಂಪರ್ಕ ಕಲ್ಪಿಸಿದ ಈ ಮಹಾನ್ ಮುತ್ಸದ್ದಿಯ ಪ್ರತಿಮೆ ಅನಾವರಣ ಕಾರ್ಯ ಐದು ನಿಮಿಷದಲ್ಲಿ ಮುಗಿದುಹೋಯಿತು.



ನಜೀರ್ ಸಾಬ್ ಅವರ ಪ್ರತಿಮೆ ಯಾವತ್ತೋ ANSSIRD & PR ಸಂಸ್ಥೆಯ ಆವರಣದಲ್ಲಿ ಸ್ಥಾಪನೆ ಆಗಬೇಕಿತ್ತು. ತುಂಬ ತಡವಾಗಿ ಆಗಿದೆ. ಇದಕ್ಕೆ ಕಾರಣರು ಯಾರು ಎನ್ನುವುದು ನಮಗೆ ಗೊತ್ತು. ಪ್ರತಿಮೆ ಸ್ಥಾಪಿಸಲು ಕಾಳಜಿ ವಹಿಸಿದವರು ಯಾರು ಎನ್ನುವುದು ಕೂಡ ಗೊತ್ತು ಎಂದು ನಜೀರ್ ಸಾಬ್ ಆದರ್ಶದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.





ಈ ನಡುವೆ ಸಚಿವರು ಯಾರಿಗೂ ಹೇಳದೆ ಗುಟ್ಟಾಗಿ ಬಂದು ಅನಾವರಣ ಮಾಡಿದ್ದಾರೆ. ಕೇವಲ 5 ನಿಮಿಷದ ಕಾರ್ಯಕ್ರಮ..!! ಪ್ರತಿಮೆ ಅನಾವರಣ ಸಂದರ್ಭದಲ್ಲಿ ನಜೀರ್ ಸಾಬ್ ಅವರಿಗೆ ಕನಿಷ್ಟ ಒಂದು ನುಡಿ ನಮನವನ್ನೂ ಮಾಡಲಿಲ್ಲ. ಮಾಧ್ಯಮ ಪ್ರತಿನಿಧಿಗಳಿಗೂ ಆಹ್ವಾನ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

ಈ ನಡುವೆ ನಜೀರ್ ಸಾಬ್ ಅವರ ಪುತ್ತಳಿ ಮುಂದೆ ಸನ್ಮಾನ್ಯ ಈಶ್ವರಪ್ಪನವರು ತಲೆ ಬಾಗಿ ಕೈ ಮುಗಿದು ನಿಂತಿರುವುದು ಮಾತ್ರ ಸಮಾಧಾನ ತರುವಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ