-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Election Update | ಪಂಚಾಯತ್ ಸಮರ: ಬೆಳ್ತಂಗಡಿಯ ವಿವಿಧೆಡೆ ನಾಮಪತ್ರ ಸಲ್ಲಿಕೆ ಭರಾಟೆ

Election Update | ಪಂಚಾಯತ್ ಸಮರ: ಬೆಳ್ತಂಗಡಿಯ ವಿವಿಧೆಡೆ ನಾಮಪತ್ರ ಸಲ್ಲಿಕೆ ಭರಾಟೆ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಚುನಾವಣೆಯ ಕಾವು ಏರತೊಡಗಿದೆ. ನಾಮಪತ್ರ ಸಲ್ಲಿಸುವ ಕಾರ್ಯ ಭರದಿಂದ ಸಾಗಿದ್ದು, ಬೆಳ್ತಂಗಡಿಯಲ್ಲಿ ವಿವಿಧ ಕಮ್ಯೂನಿಸ್ಟ್ ನಾಯಕರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ.









ಲಾಯಿಲದಲ್ಲಿ ಎಲ್ ಮಂಜುನಾಥ್, ನಾವೂರಲ್ಲಿ ನಾರಾಯಣ‌ ಕೈಕಂಬ, ಕಳೆಂಜದಲ್ಲಿ ದೇವಕಿ ಮತ್ತು‌ ಜಯಶ್ರೀ ಹಾಗೂ ಬೆಳಾಲಲ್ಲಿ ಕುಸುಮ ಅವರು ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.



ಹೀಗೆ, ಒಟ್ಟು 5 ಜನ ಈ ದಿನ ಗ್ರಾಮ ಪಂಚಾಯತು ಚುನಾವಣೆಯ ಅಭ್ಯರ್ಥಿಗಳಾಗಿ ಕಾರ್ಮಿಕ ನಾಯಕರುಗಳು ನಾಮಪತ್ರ ಸಲ್ಲಿಸಿದರು.



ಈ ಸಂದರ್ಭ ಹಿರಿಯ ಕಮ್ಯೂನಿಸ್ಟ್ ಮುಖಂಡ ಹಾಗೂ ನ್ಯಾಯವಾದಿ ಬಿ.ಎಂ.ಭಟ್ ಮತ್ತು ಲಕ್ಷ್ಮಣ ಗೌಡ, ಹಾಗೂ ಕಾರ್ಮಿಕ ನಾಯಕರುಗಳಾದ ರಾಮಚಂದ್ರ, ಪ್ರಭಾವತಿ, ಲಲಿತ, ವಾರಿಜ, ಗೌರಿ ಪಾಂಗಳ, ವೇದಾವತಿ ಮೊದಲಾದವರು ಉಪಸ್ಥಿತರಿದ್ದು ಶುಭ ಕೋರಿದರು.



ಇನ್ನು ಆರೇಳು ಜನ‌ ನಾಮಪತ್ರ ಸಲ್ಲಿಸಲಿದ್ದು, ಭರದ ಪ್ರಚಾರ ಕಾರ್ಯ ನಡೆಯಲಿದೆ ಎಂದು ನಾಯಕರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ