-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
CEO Arrested in a bribe case | ಕಾಮಗಾರಿ ಬಿಲ್ ಪಾವತಿಗೆ ಲಂಚ: ಗಿಂಬಳಕ್ಕೆ ಕೈಒಡ್ಡಿದ ಪುರಸಭೆ ಮುಖ್ಯಾಧಿಕಾರಿ ಅರೆಸ್ಟ್

CEO Arrested in a bribe case | ಕಾಮಗಾರಿ ಬಿಲ್ ಪಾವತಿಗೆ ಲಂಚ: ಗಿಂಬಳಕ್ಕೆ ಕೈಒಡ್ಡಿದ ಪುರಸಭೆ ಮುಖ್ಯಾಧಿಕಾರಿ ಅರೆಸ್ಟ್


ಪುರಸಭೆಯ ಮುಖ್ಯಾಧಿಕಾರಿಯೊಬ್ಬರು ಕಾಮಗಾರಿಯ ಬಿಲ್ ಪಾವತಿ ಮಾಡಲು ಲಂಚಕ್ಕೆ ಕೈಒಡ್ಡಿದ್ದು, ಭ್ರಷ್ಟಾಚಾರದ ದಾಹಕ್ಕೆ ಪೊಲೀಸರಿಂದ ಕೈಕೋಳ ಹಾಕಿಸಿಕೊಂಡು ಉಚಿತವಾಗಿ ಜೈಲೂಟ ಸವಿಯುವ ಭಾಗ್ಯಕ್ಕೆ ಒಳಗಾಗಿದ್ದಾರೆ. 



ಕಾಮಗಾರಿಯ ಬಿಲ್ ಪಾವತಿ ಮಾಡದೆ ಬೇಸತ್ತ ಗುತ್ತಿಗೆದಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ಅವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಲಂಚಕ್ಕೆ ಕೈಒಡ್ಡಿದ್ದ ಪುಣ್ಯಾತಿಗಿತ್ತಿ ಜೈಲು ಪಾಲಾಗಿದ್ಧಾರೆ.



ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆಯ ಬನ್ನೂರು ಪುರಸಭೆ ಮುಖ್ಯಾಧಿಕಾರಿ ಕಚೇರಿಯಲ್ಲಿ. ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.


ಕಾಮಗಾರಿಯ ಬಿಲ್ 13 ಲಕ್ಷ ರೂ. ಇದರಲ್ಲಿ ತಮಗೆ ಶೇ. 3ರಷ್ಟು ಹಣ ನೀಡಬೇಕು ಎಂಬ ಬೇಡಿಕೆಯನ್ನು ಗುತ್ತಿಗೆದಾರರಾದ ಆನಂದ ಬೋವಿ ಅವರಲ್ಲಿ ಇಟ್ಟಿದ್ದರು.


ಅದರಂತೆ 25 ಸಾವಿರ ರೂ. ಸಂದಾಯ ಮಾಡುತ್ತಿದ್ದ ವೇಳೆ ಎಸಿಬಿ ಎಸ್‌ಪಿ ಸುಮಂತ್ ಪನೇಕರ್, ಡಿವೈಎಸ್‌ಪಿ ಪರಶುರಾಮಪ್ಪ, ಅಧಿಕಾರಿಗಳಾದ ಕರೀಂ ರಾವತ್, ನಿರಂಜನ್ ಅವರು ಕ್ಷಿಪ್ರ ದಾಳಿ ನಡೆಸಿದ ಆರೋಪಿ ಪುಷ್ಪಲತಾ ಅವರನ್ನು ಬಂಧಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ