-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅತ್ಯಾಚಾರಗೈದು ಪುತ್ರಿಯ ಕೊಲೆಗೈದವನನ್ನು ನಾಡಕೋವಿಯಿಂದ ಗುಂಡಿಕ್ಕಿ ಕೊಂದ ಶಂಕರನಾರಾಯಣ ಇನ್ನಿಲ್ಲ

ಅತ್ಯಾಚಾರಗೈದು ಪುತ್ರಿಯ ಕೊಲೆಗೈದವನನ್ನು ನಾಡಕೋವಿಯಿಂದ ಗುಂಡಿಕ್ಕಿ ಕೊಂದ ಶಂಕರನಾರಾಯಣ ಇನ್ನಿಲ್ಲ

ಮಲಪ್ಪುರಂ: 2001ರಲ್ಲಿ ಕೇರಳವನ್ನು ಬೆಚ್ಚಿಬಿಟ್ಟಿದ್ದ ಕೃಷ್ಣಪ್ರಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪುತ್ರಿಯನ್ನು ಕಳೆದುಕೊಂಡ ಶಂಕರನಾರಾಯಣ, ಆರೋಪಿ ಮೊಹಮ್ಮದ್ ಕೋಯನನ್ನು ನಾಡಕೋವಿಯಿಂದ ಕೊಲೆಗೈದು ತನ್ನದೇ ರೀತಿಯಲ್ಲಿ ನ್ಯಾಯ ಕೊಟ್ಟಿದರು. 

ಅತ್ಯಾಚಾರ, ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮೊಹಮ್ಮದ್ ಕೋಯ ಬಳಿಕ ಜಾಮೀನಿನಲ್ಲಿ ಹೊರಬಂದಿದ್ದ. ಕೋಯನನ್ನು ತನ್ನದೇ ನಾಡಕೋವಿಯಿಂದ ಕೊಂದು ಬಾವಿಗೆ ದೂಡಿ ಮಣ್ಣು ಮಾಡಿದ್ದರು ಶಂಕರನಾರಾಯಣ. ಪ್ರಕರಣದಲ್ಲಿ ಬಂಧಿತರಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ  ಹೊರಬಂದಿದ್ದರು.

ಇದೀಗ ತಮ್ಮ 75ನೇ ವರ್ಷದಲ್ಲಿ ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದದ್ದಾರೆ‌‌‌. ಶಂಕರನಾರಾಯಣರು ತಮ್ಮ ಜೀವಿತಾವಧಿಯಲ್ಲಿ ಪುತ್ರಿಯ ನೆನಪಿನಲ್ಲೇ ಮುಳುಗಿದ್ದರು. ಆದರೆ “ತನ್ನ ಪುತ್ರಿಗೆ ನ್ಯಾಯ ಕೊಟ್ಟೆ ಎಂಬ ತೃಪ್ತಿಯೊಂದಿಗೆ ಅವರು ಬಾಳಿದರು” ಎಂಬುದು ನೆರೆಹೊರೆಯವರ ಮಾತನಾಡುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ