ಮಂಗಳೂರು: ಗೂಂಡಾಗಿರಿ ನಡೆಸಿ ಮನೆಯ ಕಂಪೌಂಡ್ ಧ್ವಂಸ- ಪ್ರಕರಣ ದಾಖಲು


ಮಂಗಳೂರು: ರಸ್ತೆ ವಿಸ್ತರಣೆಯ ನೆಪವೊಡ್ಡಿ ವ್ಯಕ್ತಿಯೋರ್ವನು ಗೂಂಡಾಗಿರಿ ಮನೆಯೊಂದರ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಮಂಗಳೂರಿನ ಪಚ್ಚನಾಡಿ ವೈದ್ಯನಾಥ ನಗರದಲ್ಲಿ ನಡೆದಿದೆ.

ಪಚ್ಚನಾಡಿಯ ವೈದ್ಯನಾಥ ನಗರ ನಿವಾಸಿ ಗಣೇಶ್ ಎಂಬಾತ ವಿಜೇಶ್ ಸಲ್ಡಾನ ಎಂಬವರ ಮನೆಯ ಕಾಂಪೌಂಡ್ ಅನ್ನು ಧ್ವಂಸಗೊಳಿಸಿದ್ದಾನೆ. ಮಾತ್ರವಲ್ಲದೆ ಅವರು ಈ ಬಗ್ಗೆ ವಿಚಾರಿಸಿದ್ದಕ್ಕೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತನೊಂದಿಗೆ ಸೇರಿ ಸ್ಥಳೀಯರು ಕೆಲವರು ಈ ದಾಂಧಲೆ ನಡೆಸಿದ್ದಾರೆ. ಮಹಾನಗರ ಪಾಲಿಕೆಯಿಂದ ಯಾವುದೇ ವರ್ಕ್ ಆರ್ಡರ್ ಇಲ್ಲದೇ ಮಾಜಿ ಕಾರ್ಪೊರೇಟರ್ ಸಂಗೀತ ನಾಯಕ್ ಅವರ ಪತಿ ರವೀಂದ್ರ ನಾಯಕ್ ಕುಮ್ಮಕ್ಕಿನಿಂದ ಈ ಕೃತ್ಯ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಘಟನೆಯ ಬಗ್ಗೆ ವಿಜೇಶ್ ಸಲ್ಡಾನರ ಪತ್ನಿ ಸ್ಪೂರ್ತಿಯವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಂಧಲೆ‌ ನಡೆಸಿದ ಗಣೇಶ್, ರವೀಂದ್ರ ನಾಯಕ್ ಸೇರಿ 17‌ ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu