ಮಂಗಳೂರು: ಹೀಗೆ ಓಡಾಡುತ್ತಿದ್ದರೆ ರಜೆ ಕೊಡಲ್ಲ - ಡಿಸಿ ವೀಡಿಯೋ ವೈರಲ್

ಮಂಗಳೂರು: ಹೀಗೆ ಓಡಾಡುತ್ತಿದ್ದರೆ ರಜೆ ಕೊಡುವುದಿಲ್ಲ. ಮಳೆಗೆ ಓಡಾಡಬಾರದು ಎಂದು ಮಕ್ಕಳಿಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ರವರು ಮೆತ್ತಗೆ ಗದರಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ.

ದ.ಕ.ಜಿಲ್ಲಾಧಿಕಾರಿಯವರು ದ.ಕ.ಜಿಲ್ಲಾ ಎಸ್ಪಿ, ಜಿಪಂ ಸಿಇಒ ಸೇರಿದಂತೆ ಅಧಿಕಾರಿಗಳೊಂದಿಗೆ ನಿನ್ನೆ ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು‌. ಈ ವೇಳೆ ನಾಲ್ಕು ಮಕ್ಕಳಿದ್ದ ಗುಂಪೊಂದು ಇದನ್ನು ವೀಕ್ಷಿಸುತ್ತಿತ್ತು‌. ಆಗ ಅವರನ್ನು ಗಮನಿಸಿದ ಡಿಸಿಯವರು ಹೀಗೆ ಓಡಾಡುತ್ತಿದ್ದರೆ ರಜೆ ಕೊಡುವುದಿಲ್ಲ. ಮಳೆಗೆ ಓಡಾಡಬಾರದು ಎಂದಿದ್ದಾರೆ. ಈ ವೇಳೆ ಅವರಲ್ಲೋರ್ವ ಹುಡುಗ "ನಾಳೆ ಮತ್ತೆ ರಜೆಯಾ" ಎಂದು ಡಿಸಿಯವರನ್ನೇ ಪ್ರಶ್ನಿಸಿದ್ದಾನೆ. ಈ ವೇಳೆ ಅಲ್ಲಿ ನಗೆಗಡಲು ತೇಲಿ ಬಂದಿದೆ. ವಿದ್ಯಾರ್ಥಿಯ ಈ ಮಾತಿನಿಂದ ಮುಗುಳ್ನಕ್ಕ ಡಿಸಿಯವರು ಹುಡುಗನ ಬೆನ್ನು ತಟ್ಟಿ ಮುಂದೆ ಹೋಗಿದ್ದಾರೆ.




ಎರಡು ಹೆಜ್ಜೆ ಮುಂದಿಟ್ಟು ಹಿಂದಿರುಗಿದ ಡಿಸಿಯವರು "ಎಲ್ಲಿ ಸ್ಕೂಲ್?" ಎಂದು ಪ್ರಶ್ನಿಸಿದ್ದಾರೆ. ಆಗ ಮಕ್ಕಳು ಗೂಡಿನ ಬಳಿ ಎಂದು ಹೇಳುತ್ತಾರೆ. ಇದೀಗ ಈ ವೀಡಿಯೋ ಭಾರೀ ವೈರಲ್ ಆಗಿದೆ. ಕಳೆದ ಬಾರಿಯ ಮಳೆಯ ಸಂದರ್ಭದಲ್ಲಿ "ಮಕ್ಕಳು ದಿನಾ ಬೆಳಗ್ಗೆ ಕರೆ ಮಾಡಿ ಇವತ್ತು ರಜೆ ಇದೆಯಾ?" ಎಂದು ಕೇಳುತ್ತಾರೆ ಎಂದು ಡಿಸಿ ಮುಲ್ಲೈ ಮುಗಿಲನ್ ಹೇಳಿದ್ದ ವೀಡಿಯೋ ಭಾರೀ ವೈರಲ್ ಆಗಿತ್ತು.




BREAKING NEWS
Loading latest news...
Join our WhatsApp Channel Powered By : Online Pudu