-->
1000938341
ಸುಳ್ಯ: ಮರಬಿದ್ದು ಮಹಿಳೆ ಮೃತ್ಯು

ಸುಳ್ಯ: ಮರಬಿದ್ದು ಮಹಿಳೆ ಮೃತ್ಯು


ಸುಳ್ಯ: ತೋಟಕ್ಕೆ ಹೋಗಿದ್ದ ವೇಳೆ ಮೈಮೇಲೆ ಮರಬಿದ್ದು ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಳಿಯಲ್ಲಿ ನಡೆದಿದೆ.

ಬಸವನಮೂಲೆ ನಿವಾಸಿ ಶೇಷಪ್ಪ ಎಂಬವರ ಪತ್ನಿ ಮೀನಾಕ್ಷಿ ಬಸವನಮೂಲೆ (65) ಮೃತ ದುರ್ದೈವಿ.

ಮೀನಾಕ್ಷಿಯವರು ತಮ್ಮ ತೋಟದಲ್ಲಿ ಕಟ್ಟಿದ್ದ ಜಾನುವಾರು ಬಿಡಿಸಿ ತರಲು ಸಂಜೆ ತೆರಳಿದ್ದರು. ಈ ವೇಳೆ ಜೋರಾಗಿ ಗಾಳಿ‌ - ಮಳೆ ಬಂದಿದೆ. ಆಗ ಬೃಹತ್ ಗಾತ್ರದ ಮರವೊಂದು ಮೀನಾಕ್ಷಿಯವರ ಮೇಲೆಯೇ ಬಿದ್ದಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.


Ads on article

Advertise in articles 1

advertising articles 2

Advertise under the article