![ಶೂದ್ರನಾಗಿ ಹುಟ್ಟಿದ್ದಕ್ಕೆ BJ ನನಗೆ ಟಿಕೆಟ್ ಕೊಡಲಿಲ್ಲ: ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಶೂದ್ರನಾಗಿ ಹುಟ್ಟಿದ್ದಕ್ಕೆ BJ ನನಗೆ ಟಿಕೆಟ್ ಕೊಡಲಿಲ್ಲ: ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್](https://blogger.googleusercontent.com/img/b/R29vZ2xl/AVvXsEjtdZpH01zetbS2QY1qWIuZikxLwWzPhiBT9aA3g5FRxInTyjv_LeiBu72sXMs3M6N8FIqVWnXf-LS9MmK2SHS5bp9kvvm-WKQ9cpQCqaWAEqxjQAdqiD7shSHW_G1sR_Msg5lbUa5xVBZMKP5A4OvItfyC6MvAjw-r17T1G0pi-QFcUjzJQIRJ1TM-Rzc1/s320/Screenshot_20240402_201808_Gallery.jpg)
ಶೂದ್ರನಾಗಿ ಹುಟ್ಟಿದ್ದಕ್ಕೆ BJ ನನಗೆ ಟಿಕೆಟ್ ಕೊಡಲಿಲ್ಲ: ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್
Tuesday, April 2, 2024
ಶೂದ್ರನಾಗಿ ಹುಟ್ಟಿದ್ದಕ್ಕೆ ಬಿಜೆಪಿ ನನಗೆ ಟಿಕೆಟ್ ಕೊಡಲಿಲ್ಲ: ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಸುರತ್ಕಲ್
ತನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡದಿರಲು, ನಾನು ಹುಟ್ಟಿದ ಜಾತಿ, ಊರು ಸರಿಯಲ್ಲ. ನಾನು ಬ್ರಾಹ್ಮಣ, ಒಕ್ಕಲಿಗ, ಬಂಟ, ಲಿಂಗಾಯತನಾಗಿ ಹುಟ್ಟಿದ್ದರೆ ಅವಕಾಶ ಸಿಗುತ್ತಿತ್ತು. ಶೂದ್ರ ಸಮಾಜದಲ್ಲಿ ಹುಟ್ಟಿದ್ದರಿಂದ ಸೇವೆ ಮಾಡಲು ಮಾತ್ರ ನನಗೆ ಅವಕಾಶವಿದೆ. ಆದ್ದರಿಂದ ಶೂದ್ರರು ತಾವಾಗಿಯೇ ಸ್ಥಾನ ಕೇಳಲು ಹೋಗಬಾರದು. ಇಲ್ಲಿ ನಾಯಕರು ಹೇಳಿದಂತೆ, ಬಾಲಮುದುರಿಕೊಂಡು ಬಕೆಟ್ ಹಿಡಿಯುವವರಿಗೆ, ಗುಲಾಮರಿಗೆ ಮಾತ್ರ ಬೆಲೆ. ಸ್ವಂತ ಶಕ್ತಿ ಇರುವವರಿಗೆ ಬೆಲೆಯಿಲ್ಲ ಎಂದರು.