-->
1000938341
ಕುಂದಾಪುರದ ಯುವಕ ಜರ್ಮನಿಯ ಯುವತಿಯ ವಿದೇಶೀ ಪ್ರೀತಿಗೆ ಸ್ವದೇಶದಲ್ಲಿ ವಿವಾಹ ಬಂಧನ

ಕುಂದಾಪುರದ ಯುವಕ ಜರ್ಮನಿಯ ಯುವತಿಯ ವಿದೇಶೀ ಪ್ರೀತಿಗೆ ಸ್ವದೇಶದಲ್ಲಿ ವಿವಾಹ ಬಂಧನ


ಕುಂದಾಪುರ: ಪ್ರೀತಿಗೆ ಜಾತಿ, ಗಡಿ, ಧರ್ಮಗಳ ಯಾವುದೇ ಬೇಲಿಯಿಲ್ಲ ಎಂಬುವುದು ಬಹಳಷ್ಟು ಬಾರಿ ಸಾಬೀತಾಗುತ್ತಲೇ ಇದೆ. ಗಡಿ ಮೀರಿದ ಸೀಮಾ ಹೈದರ್​,  ಅಂಜು ಲವ್​ ಸ್ಟೋರಿಗಳು ನಮ್ಮ ಮುಂದೆ ನಿದರ್ಶನದಂತಿದೆ. ಇಲ್ಲೊಂದು ಅಪರೂಪದ ಲವ್​ ಸ್ಟೋರಿ ಭಾರತಕ್ಕೂ ಜರ್ಮನಿಗೂ ಸಂಬಂಧ ಬೆಸೆದಿದೆ.

ಕುಂದಾಪುರದ ಆಜ್ರಿ ಮೂಲದ ಯುವಕ ಹಾಗೂ ಜರ್ಮನಿಯ ಯುವತಿಯ ವಿವಾಹವ ಹಿಂದೂ ಸಂಪ್ರದಾಯದಂತೆ ಜ.1ರಂದು ನೆರವೇರಿತು. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಈ ಗಡಿ ದಾಟಿದ ಪ್ರೇಮಿಗಳು ಹಸೆಮಸೆ ಏರಿದ್ದಾರೆ. ಎರಡೂ ಕುಟುಂಬಗಳ ಹಿರಿಯರು ಈ ಮದುವೆಗೆ ಸಾಕ್ಷಿಯಾದರು. 

ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್ ಮತ್ತು ಪೀಟರ್ ಶ್ರೂಆರ್ ಮುನಿಸ್ತರ್ ಯುನಿಕಬ್  ದಂಪತಿ ಪುತ್ರಿ ಕಾರಿನ್​​ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿ.

ಚಂದನ್ ಅವರು ಜರ್ಮನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಅಲ್ಲಿ ಶಿಕ್ಷಕಿಯಾಗಿರುವ ಕಾರಿನ್ ಎಂಬಾಕೆಯನ್ನು ಆತ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಕುಟುಂಬಿಕರನ್ನು ಒಪ್ಪಿಸಿ ಹಸೆಮಣೆ ಏರಿದ್ದಾರೆ. ಹಿಂದೂ ಸಂಪ್ರದಾಯದಂತೆ ಜ.1ರಂದು  ವಿವಾಹ ನೆರವೇರಿದ್ದು, ಎರಡು ಕಡೆಯ ಬಂಧು -ಮಿತ್ರರು ವಿವಾಹದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭಕೋರಿದ್ದಾರೆ.

Ads on article

Advertise in articles 1

advertising articles 2

Advertise under the article