ಮರೋಳಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ರಾಮ ತಾರಕ ಹವನ



ಅಯೋಧ್ಯ ಪ್ರಭು ಶ್ರೀ ರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆಯ ನಿಮಿತ್ತ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ರಾಮ ತಾರಕ ಹವನ ನಡೆಸಲಾಯಿತು.





 ದೀಪ ಪ್ರಜ್ವಲನೆ ಮುಖಾಂತರ ಪ್ರಾರಂಭ ಗೊಂಡ  ಕಾರ್ಯಕ್ರಮವನ್ನು ಗಣೇಶ್ ಶೆಟ್ಟಿ ಜಪುಗುಡ್ಡೆಗುತ್ತು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಮತಾರಕ ಹವನ ನಡೆಯಿತು. 

ಇದೇ ಸಂದರ್ಭದಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ನೂರಾರು ಭಕ್ತಾದಿಗಳು, ರಾಮ ಭಕ್ತರು ವೀಕ್ಷಣೆ ಮಾಡಿದರು . ಮಧ್ಯಾಹ್ನ ಸೂರ್ಯನಾರಾಯಣ ದೇವರಿಗೆ ಮಂಗಳಾರತಿ ನಡೆಯಿತು .

BREAKING NEWS
Loading latest news...
Join our WhatsApp Channel Powered By : Online Pudu