-->
1000938341
ಮಂಗಳೂರು: ಹೈವೆಯಲ್ಲಿ ಸ್ಟೂಲ್ ನಲ್ಲಿ ಕುಳಿತು ಬಸ್ ಗೆ ತಡೆಯೊಡ್ಡಿದ ಉದ್ಯಮಿ - ಸಿನಿಮೀಯ ಮಾದರಿಯಲ್ಲಿ ಪ್ರಯಾಣಿಕರಿಗೆ ನೆರವು

ಮಂಗಳೂರು: ಹೈವೆಯಲ್ಲಿ ಸ್ಟೂಲ್ ನಲ್ಲಿ ಕುಳಿತು ಬಸ್ ಗೆ ತಡೆಯೊಡ್ಡಿದ ಉದ್ಯಮಿ - ಸಿನಿಮೀಯ ಮಾದರಿಯಲ್ಲಿ ಪ್ರಯಾಣಿಕರಿಗೆ ನೆರವು

ಮಂಗಳೂರು: ತಮಗಾಗುವ ತೊಂದರೆಗಳನ್ನು ಸರಿಪಡಿಸಲು, ಸುಧಾರಣೆಗಳನ್ನು ತರಲು ಪ್ರತಿಭಟನೆ ಮಾಡುವುದು ಸಹಜ. ಆದರೆ ಇಲ್ಲೊಬ್ಬರು ತೊಂದರೆ ಸರಿಪಡಿಸಲು ವಿಶೇಷ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಇದೊಂದು ಸಿನಿಮೀಯ ಶೈಲಿಯ ಸನ್ನಿವೇಶ ಎಂಬ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಗಮನ ಸೆಳೆದಿದೆ. ಅಷ್ಟಕ್ಕೂ ಸರ್ಕಾರಿ ಬಸ್​ ಸ್ಥಳೀಯ ಪ್ರಯಾಣಿಕರನ್ನು ನಿರ್ಲಕ್ಷಿಸಿ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ.

ಮಂಗಳೂರಿನಿಂದ ಕೇರಳಕ್ಕೆ ಹೋಗುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಸರ್ವಿಸ್ ರಸ್ತೆ​​ಗೆ ಬಾರದೆ ಆಗಾಗ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತಿತ್ತು. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ್ದ ಸ್ಥಳೀಯ ಉದ್ಯಮಿ ಹುಸೈನಾರ್ ಎನ್ನುವವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿ ಬಸ್ ಅನ್ನು ಸರ್ವೀಸ್ ರಸ್ತೆಗೆ ಇಳಿಯುವಂತೆ ಮಾಡಿದ್ದಾರೆ.

ಹಸೈನಾರ್ ಅವರು ಬಸ್​ ಬರುವ ಸಮಯಕ್ಕೆ ಸರಿಯಾಗಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸ್ಟೂಲ್ ಇಟ್ಟು ಅದರ ಮೇಲೆ ಕುಳಿತಿದ್ದಾರೆ. ಬಳಿಕ ಹೈವೇಯಲ್ಲಿ ಹೋಗುವ ಬಸ್​ಗೆ ತಡೆವೊಡ್ಡಿದ್ದಾರೆ. ಈ ಮೂಲಕ ಬಸ್​ ಹೆದ್ದಾರಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ದೂರ ರಿವರ್ಸ್ ಹೋಗುವಂತೆ ಮಾಡಿ ಸರ್ವಿಸ್​ ರೋಡ್​ನಲ್ಲಿ ತೆರಳುವಂತೆ ಮಾಡಿದ್ದಾರೆ. ಹೀಗೆ ಮಾಡಿದ ಅವರು ಸ್ಥಳೀಯ ಪ್ರಯಾಣಿಕರಿಗೆ ನೆರವಾಗಿದ್ದು, ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article