ಪಿತೃಪಕ್ಷದಲ್ಲಿ ಕಾಗೆಗಳಿಗೆ ಆಹಾರ ನೀಡುವುದರಿಂದ ಏನೆಲ್ಲಾ ಒಳಿತು ಸಂಭವಿಸಲಿದೆ ಎಂಬುದು ಇಲ್ಲಿದೆ ನೋಡಿ!


ಪೌರಾಣಿಕ ಕಥೆಯ ಪ್ರಕಾರ ಇಂದ್ರನ ಮಗ ಜಯಂತ್ ಭಗವಾನ್ ಶ್ರೀರಾಮನ ಮುಂದೆ ಕಾಗೆಯ ರೂಪವನ್ನು ಪಡೆದಿದ್ದನು. ಅವನು ಸೀತೆಯ ಪಾದಗಳನ್ನು ಕಚ್ಚಿದನು. ಶ್ರೀರಾಮನು ಅವನನ್ನು ಶಿಕ್ಷಿಸಿದಾಗ, ಕಾಗೆ ಕ್ಷಮೆ ಕೇಳಲು ಪ್ರಾರಂಭಿಸಿತು. 

ಹೀಗಾಗಿ ಶ್ರೀರಾಮನು ಆತನನ್ನು ಕ್ಷಮಿಸಿದನು ಮತ್ತು ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಕೊಡುವ ಆಹಾರವನ್ನು ಪಿತೃಲೋಕದಲ್ಲಿ ನೆಲೆಸಿರುವ ಪಿತೃದೇವತೆಗಳಿಗೆ ಸಿಗುತ್ತದೆ ಎಂದು ಆಶೀರ್ವದಿಸಿದನು.

ಇದಲ್ಲದೆ ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಮಾತ್ರವಲ್ಲದೆ ಹಸುಗಳು, ನಾಯಿಗಳು ಮತ್ತು ಇತರ ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತದೆ. ಈ ಜೀವಿಗಳು ಆಹಾರವನ್ನು ಸ್ವೀಕರಿಸದಿದ್ದರೆ, ಅದು ಪಿತೃದೇವತೆಗಳ ಅತೃಪ್ತಿ ಅಥವಾ ಅಸಮಾಧಾನದ ಸಂಕೇತವಾಗಿರಬಹುದು ಎಂದು ನಂಬಲಾಗಿದೆ.