-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
MANGALORE- ಪತಿಗೆ ಹಾವು ಕಚ್ಚಿದ ವಿಷಯ ತಿಳಿದು ಪತ್ನಿಗೆ ಹೃದಯಾಘಾತ

MANGALORE- ಪತಿಗೆ ಹಾವು ಕಚ್ಚಿದ ವಿಷಯ ತಿಳಿದು ಪತ್ನಿಗೆ ಹೃದಯಾಘಾತ


ಮಂಗಳೂರು: ನೆಲ್ಯಾಡಿಯ ದೋಂತಿಲ ಸಮೀಪದ ತೋಟ ಎಂಬಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿ ಯಾಗಿದ್ದ ಪದ್ಮಯ್ಯ ಗೌಡ ಎಂಬ ವರಿಗೆ ವಿಷದ ಹಾವೊಂದು ಕಚ್ಚಿದ್ದು, ಈ ವಿಷಯ ತಿಳಿದ ಅವರ ಪತ್ನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಪದ್ಮಯ್ಯ ಗೌಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯ ಲಾಗಿದೆ ಎಂಬ ವಿಷಯ ತಿಳಿದು, ಅವರ ಪತ್ನಿ ಸೇಸಮ್ಮ ಯಾನೆ ಜಾನಕಿ (60) ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.

 ಪದ್ಮಯ ಗೌಡರಿಗೆ ಆ.5ರಂದುಬೆಳಗ್ಗೆ ಕೃಷಿ ತೋಟದಲ್ಲಿ ವಿಷದ ಹಾವೊಂದು ಕಚ್ಚಿದ್ದು, ಅವರನ್ನು ಮಂಗಳೂರಿಗೆ ಕರೆದೊಯ್ಯ ಲಾಗಿತ್ತು. ಈ ವಿಷಯ ತಿಳಿದ ಅವರ ಪತ್ನಿ ಸೇಸಮ್ಮ ತಮ್ಮ ಆಘಾತಗೊಂಡು ಹಾರ್ಟ್ ಅಟ್ಯಾಕ್ ನಿಂದ
 ಮೃತಪಟ್ಟರು. ಇದೀಗ ಪದ್ಮಯ ಗೌಡ ಅವರು ಆಸ್ಪತ್ರೆಯಲ್ಲಿ
ಚೇತರಿಸಿ ಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ಸೇಸಮ್ಮ ಅವರಿಗೆ ಪತಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.

Ads on article

Advertise in articles 1

advertising articles 2

Advertise under the article