![ಹಳೆ ದ್ವೇಷಕ್ಕೆ ಬಲಿಯಾದ ಸ್ನೇಹಿತ: ಕಟ್ಟಿಗೆಯಿಂದ ಹೊಡೆದು ಭೀಕರ ಕೊಲೆ ಹಳೆ ದ್ವೇಷಕ್ಕೆ ಬಲಿಯಾದ ಸ್ನೇಹಿತ: ಕಟ್ಟಿಗೆಯಿಂದ ಹೊಡೆದು ಭೀಕರ ಕೊಲೆ](https://lh3.googleusercontent.com/-7nOeRDS3PhI/Y_7Kc3Bvm_I/AAAAAAAATQk/cmsO3EACzcAzCg91vMWEWWO89yibZQtSgCNcBGAsYHQ/s1600/1677642346431782-0.png)
ಹಳೆ ದ್ವೇಷಕ್ಕೆ ಬಲಿಯಾದ ಸ್ನೇಹಿತ: ಕಟ್ಟಿಗೆಯಿಂದ ಹೊಡೆದು ಭೀಕರ ಕೊಲೆ
Wednesday, March 1, 2023
ದಾವಣಗೆರೆ: ಹಳೆಯ ದ್ವೇಷವೊಂದು ಕೊಲೆಯಿಂದ ಅಂತ್ಯಗೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಆರೋಪಿ ಸ್ನೇಹಿತನನ್ನೇ ಕಟ್ಟಿಗೆಯಿಂದ ಬಡಿದು ಭೀಕರವಾಗಿ ಹತ್ಯೆ ಮಾಡುವ ಮೂಲಕ ತನ್ನ ಹಳೇ ದ್ವೇಷವನ್ನು ತೀರಿಸಿಕೊಂಡಿದ್ದಾನೆ.
ಈ ಕೊಲೆ ದಾವಣಗೆರೆ ಜಿಲ್ಲೆಯಯ ಕಟ್ಟೂರು ಬಸಪ್ಪ ನಗರದ ಎಲವಟ್ಟಿ ರೈಸ್ ಮಿಲ್ ಬಳಿ ನಡೆದಿದೆ. ಪ್ರಶಾಂತ (29) ಭೀಕರವಾಗಿ ಕೊಲೆಯಾದ ವ್ಯಕ್ತಿ. ರಾಕೇಶ್ ಎಂಬಾತನೇ ಕೊಲೆ ಆರೋಪಿ. ಬಳಿಕ ಈತ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ರಾಕೇಶ್ ಹಾಗೂ ಪ್ರಶಾಂತ್ ಸ್ನೇಹಿತರು. ಆದರೆ ಕೆಲವು ದಿನಗಳಿಂದ ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು. ಇಬ್ಬರ ಮಧ್ಯೆ ರಾಜಿ ಮಾಡಿಸಿದ್ದರೂ ದ್ವೇಷ ಮುಂದುವರಿದಿತ್ತು. ಅದೇ ಹಳೇ ದ್ವೇಷದಿಂದಾಗಿ ರಾಕೇಶ್ ತನ್ನ ಪ್ರಶಾಂತ್ನ ತಲೆಗೆ ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಹೊಡೆತದ ತೀವ್ರತೆಗೆ ಪ್ರಶಾಂತ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನಾ ಸ್ಥಳಕ್ಕೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರ್ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.