-->

ಇಂಗುವಿನ ಈ ಜ್ಯೋತಿಷ್ಯ ಪರಿಹಾರಗಳು ನಿಮ್ಮನ್ನು ಈ ಎಲ್ಲಾ ಸಮಸ್ಯೆಯಿಂದ ಮುಕ್ತರನ್ನಾಗಿಸುತ್ತದೆ..!

ಇಂಗುವಿನ ಈ ಜ್ಯೋತಿಷ್ಯ ಪರಿಹಾರಗಳು ನಿಮ್ಮನ್ನು ಈ ಎಲ್ಲಾ ಸಮಸ್ಯೆಯಿಂದ ಮುಕ್ತರನ್ನಾಗಿಸುತ್ತದೆ..!



ಸಾಲಬಾಧೆಯಿಂದ ಮುಕ್ತಿ
ಸಾಲದ ಬಾಧೆಯಿಂದ ತಲೆತಲಾಂತರದವರೆಗೆ ಸಾಲದ ಸುಳಿಗೆ ಸಿಲುಕಿರುವವರು ಇಂಗು ಉಂಡೆಯನ್ನು ನೀರಿನಲ್ಲಿ ಕರಗಿಸಿ ಸ್ನಾನ ಮಾಡುವುದರಿಂದ ಸಾಲಬಾಧೆಯಿನ ಬೇಗ ಮುಕ್ತಿ ಸಿಗುತ್ತದೆ. 

ನಕಾರಾತ್ಮಕ ಶಕ್ತಿ ನಾಶಕ
ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ದರೆ, 5 ಗ್ರಾಂ ಇಂಗು, 5 ಗ್ರಾಂ ಕರ್ಪೂರ ಮತ್ತು 5 ಗ್ರಾಂ ಕರಿಮೆಣಸಿನ ಪುಡಿಯನ್ನು ತಯಾರಿಸಿ ಅದರಿಂದ ಸಣ್ಣ ಉಂಡೆಗಳನ್ನು ಮಾಡಿ. ಈಗ ಈ ಉಂಡೆಗಳನ್ನು ಸಮಾನವಾಗಿ ಭಾಗಿಸಿ. ಈ ಉಂಡೆಗಳನ್ನು ಮನೆಯಲ್ಲಿ ಒಂದು ಬೆಳಗ್ಗೆ ಮತ್ತು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಸುಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. 

ಪ್ರೇತಬಾಧೆಯಿಂದ ಮುಕ್ತಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇಂಗುವಿನ ಈ ಪರಿಹಾರವು ಮನೆಯಲ್ಲಿ ಯಾವುದೇ ರೀತಿಯ ಭೂತ, ಪ್ರೇತ ಮತ್ತು ಮಾಟ-ಮಂತ್ರವನ್ನು ತಟಸ್ಥಗೊಳಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಇಂಗು ನೀರಿನಿಂದ ಮನೆಯನ್ನು ತೊಳೆಯಿರಿ. ಈ ಪರಿಹಾರವನ್ನು ಹುಣ್ಣಿಮೆಯ ರಾತ್ರಿ ಮಾಡಿದರೆ, ಅದರ ಪರಿಣಾಮವು ಬಹಳ ಬೇಗ ಗೋಚರಿಸುತ್ತದೆ. 

ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲು ಈ ಉಪಾಯ ಮಾಡಿ
ನಿಮ್ಮ ಯಾವುದೇ ಕೆಲಸವು ದೀರ್ಘಕಾಲದವರೆಗೆ ನೆನೆಗುದಿಗೆ ಬಿದ್ದಿದ್ದರೆ ಅಥವಾ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತಿಲ್ಲ ಎಂದಾದಲ್ಲಿ, ಒಂದು ಚಿಟಿಕೆ ಇಂಗು ತೆಗೆದುಕೊಂಡು ಅದನ್ನು ಉತ್ತರ ದಿಕ್ಕಿಗೆ ಎಸೆಯಿರಿ. 

Ads on article

Advertise in articles 1

advertising articles 2

Advertise under the article