-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮನೆಯಲ್ಲಿ ಈ ರೀತಿಯ ವಿಗ್ರಹಗಳು ಇದ್ದರೆ ಲಕ್ಷ್ಮೀದೇವಿ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ..! ಇದು ತುಂಬಾನೇ ಶುಭ ಸಂಕೇತ..!

ಮನೆಯಲ್ಲಿ ಈ ರೀತಿಯ ವಿಗ್ರಹಗಳು ಇದ್ದರೆ ಲಕ್ಷ್ಮೀದೇವಿ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ..! ಇದು ತುಂಬಾನೇ ಶುಭ ಸಂಕೇತ..!



ಗಣೇಶನ ವಿಗ್ರಹ:
ವಾಸ್ತು ಶಾಸ್ತ್ರದ ಪ್ರಕಾರ, ವಿಘ್ನ ವಿನಾಶಕ ಗಣೇಶನ ವಿಗ್ರಹವನ್ನು ಮನೆಯಲ್ಲಿ ಇಡುವುದು ತುಂಬಾ ಶುಭ. ವಾಸ್ತುವಿನ ಪ್ರಕಾರ, ಮನೆಯ ಮುಖ್ಯ ಬಾಗಿಲಿನಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆ ಆಗುತ್ತದೆ. 

ಆಮೆಯ ಪ್ರತಿಮೆ:
ವಾಸ್ತು ಶಾಸ್ತ್ರದಲ್ಲಿ ಆಮೆಯ ಪ್ರತಿಮೆಗೆ ಬಹಳ ಮಹತ್ವವಿದೆ. ಯಾವ ಮನೆಯಲ್ಲಿ ಆಮೆಯ ಪ್ರತಿಮೆ ಇರುತ್ತದೆಯೋ ಅಂತಹ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.


ಹಸು ಕರುವಿನ ಪ್ರತಿಮೆ:
 ಯಾವ ಮನೆಯಲ್ಲಿ ಕರುವಿಗೆ ಹಾಲುಣಿಸುವ ಹಸುವಿನ ವಿಗ್ರಹವಿರುತ್ತದೆಯೋ ಅಂತಹ ಮನೆಯಲ್ಲಿ ಸುಖ-ಸಂತೋಷಕ್ಕೆ ಎಂದಿಗೂ ಕೊರತೆ ಇರುವುದಿಲ್ಲ ಎಂಬುದು ನಂಬಿಕೆ ಆಗಿದೆ.

ಕುದುರೆಯ ಪ್ರತಿಮೆ:
ಓಡುವ ಕುದುರೆಯು ಪ್ರಗತಿಯ ಸೂಚಕವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಓಡುವ ಕುದುರೆಯ ವಿಗ್ರಹವು ಮನುಷ್ಯನ ಪ್ರಗತಿಯನ್ನು ಸೂಚಿಸುತ್ತದೆ. ಇದು ವ್ಯಕ್ತಿಯ ಯಶಸ್ಸಿನ ಮೇಲೆ ಬಹಳ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.

ಆನೆಯ ವಿಗ್ರಹ:
ಮನೆಯಲ್ಲಿ ಆನೆಯ ವಿಗ್ರಹವನ್ನು ಸಾಕ್ಷಾತ್ ತಾಯಿ ಲಕ್ಷ್ಮಿಯ ಸ್ವರೂಪವೆಂದು ಪರಿಗಣಿಸಲಾಗಿದೆ. ಸೊಂಡಿಲು ಎತ್ತಿರುವ ಆನೆಯ ವಿಗ್ರಹವಿರುವ ಮನೆಯಲ್ಲಿ ಹಣಕ್ಕೆ ಎಂದಿಗೂ ಕೊರತೆ ಇರುವುದಿಲ್ಲ ಎಂಬುದು ನಂಬಿಕೆ.

Ads on article

Advertise in articles 1

advertising articles 2

Advertise under the article

ಸುರ