-->

ಮನೆಯಲ್ಲಿ ಈ ರೀತಿಯ ವಿಗ್ರಹಗಳು ಇದ್ದರೆ ಲಕ್ಷ್ಮೀದೇವಿ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ..! ಇದು ತುಂಬಾನೇ ಶುಭ ಸಂಕೇತ..!

ಮನೆಯಲ್ಲಿ ಈ ರೀತಿಯ ವಿಗ್ರಹಗಳು ಇದ್ದರೆ ಲಕ್ಷ್ಮೀದೇವಿ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ..! ಇದು ತುಂಬಾನೇ ಶುಭ ಸಂಕೇತ..!



ಗಣೇಶನ ವಿಗ್ರಹ:
ವಾಸ್ತು ಶಾಸ್ತ್ರದ ಪ್ರಕಾರ, ವಿಘ್ನ ವಿನಾಶಕ ಗಣೇಶನ ವಿಗ್ರಹವನ್ನು ಮನೆಯಲ್ಲಿ ಇಡುವುದು ತುಂಬಾ ಶುಭ. ವಾಸ್ತುವಿನ ಪ್ರಕಾರ, ಮನೆಯ ಮುಖ್ಯ ಬಾಗಿಲಿನಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆ ಆಗುತ್ತದೆ. 

ಆಮೆಯ ಪ್ರತಿಮೆ:
ವಾಸ್ತು ಶಾಸ್ತ್ರದಲ್ಲಿ ಆಮೆಯ ಪ್ರತಿಮೆಗೆ ಬಹಳ ಮಹತ್ವವಿದೆ. ಯಾವ ಮನೆಯಲ್ಲಿ ಆಮೆಯ ಪ್ರತಿಮೆ ಇರುತ್ತದೆಯೋ ಅಂತಹ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.


ಹಸು ಕರುವಿನ ಪ್ರತಿಮೆ:
 ಯಾವ ಮನೆಯಲ್ಲಿ ಕರುವಿಗೆ ಹಾಲುಣಿಸುವ ಹಸುವಿನ ವಿಗ್ರಹವಿರುತ್ತದೆಯೋ ಅಂತಹ ಮನೆಯಲ್ಲಿ ಸುಖ-ಸಂತೋಷಕ್ಕೆ ಎಂದಿಗೂ ಕೊರತೆ ಇರುವುದಿಲ್ಲ ಎಂಬುದು ನಂಬಿಕೆ ಆಗಿದೆ.

ಕುದುರೆಯ ಪ್ರತಿಮೆ:
ಓಡುವ ಕುದುರೆಯು ಪ್ರಗತಿಯ ಸೂಚಕವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಓಡುವ ಕುದುರೆಯ ವಿಗ್ರಹವು ಮನುಷ್ಯನ ಪ್ರಗತಿಯನ್ನು ಸೂಚಿಸುತ್ತದೆ. ಇದು ವ್ಯಕ್ತಿಯ ಯಶಸ್ಸಿನ ಮೇಲೆ ಬಹಳ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.

ಆನೆಯ ವಿಗ್ರಹ:
ಮನೆಯಲ್ಲಿ ಆನೆಯ ವಿಗ್ರಹವನ್ನು ಸಾಕ್ಷಾತ್ ತಾಯಿ ಲಕ್ಷ್ಮಿಯ ಸ್ವರೂಪವೆಂದು ಪರಿಗಣಿಸಲಾಗಿದೆ. ಸೊಂಡಿಲು ಎತ್ತಿರುವ ಆನೆಯ ವಿಗ್ರಹವಿರುವ ಮನೆಯಲ್ಲಿ ಹಣಕ್ಕೆ ಎಂದಿಗೂ ಕೊರತೆ ಇರುವುದಿಲ್ಲ ಎಂಬುದು ನಂಬಿಕೆ.

Ads on article

Advertise in articles 1

advertising articles 2

Advertise under the article