-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
‘ಸಂಸ್ಕೃತ ಎಂದೂ ನಶಿಸದ ಭಾಷೆ’- ಡಾ.ಎಚ್.ಆರ್. ವಿಶ್ವಾಸ

‘ಸಂಸ್ಕೃತ ಎಂದೂ ನಶಿಸದ ಭಾಷೆ’- ಡಾ.ಎಚ್.ಆರ್. ವಿಶ್ವಾಸ

 

 


ವಿದ್ಯಾಗಿರಿ: ‘ಸಂಸ್ಕೃತ ಸಾಯುತ್ತಿದೆ ಎಂಬುದು ಸುಳ್ಳು. ಎಲ್ಲ ಭಾಷೆಗಳಲ್ಲಿ ಸಂಸ್ಕೃತÀ ಹಾಸುಹೊಕ್ಕಿದೆ. ಅದು ಎಂದಿಗೂ ನಶಿಸಿ ಹೋಗುವುದಿಲ್ಲ  ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್ ಡಾ.ಎಚ್.ಆರ್. ವಿಶ್ವಾಸ ಭರವಸೆ ವ್ಯಕ್ತಪಡಿಸಿದರು.

ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕೃತದ ಪ್ರಯೋಗ ಸಾಧ್ಯತೆ ಎಂಬ ವಿಷಯ ಕುರಿತು ನಡೆದಪ್ರಜ್ಞಾ ಜಿಜ್ಞಾಸ ವೇದಿಹಿಃ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲ ಭಾಷೆಯಲ್ಲೂ ಸಂಸ್ಕೃತ ಇದೆ. ಭಾರತದಲ್ಲಿ ಹಿಂದೆ ಸಂಸ್ಕೃತವನ್ನು ಎಲ್ಲ ಸಮುದಾಯದವರು ಉಪಯೋಗಿಸಿದ್ದು, ಕಾಲಾಂತರದಲ್ಲಿ ಒಂದು ಧರ್ಮದವರು ಅಥವಾ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಯಿತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಅದರ ಸ್ಥಾನ ಕಡಿಮೆಯಾದರೂ,  ಬಳಕೆ ಹೆಚ್ಚುತ್ತಿದೆ ಎಂದರು.

ಶಾಲಾ-ಕಾಲೇಜುಗಳಲ್ಲಿ ಸಂಸ್ಕೃತವನ್ನು ಸಂಸ್ಕೃತದಲ್ಲೇ ಬೋಧಿಸಬೇಕು. ಲಂಡನ್ ಜೇಮ್ಸ್ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ 7ನೇ ತರಗತಿಯವರೆಗೂ ಸಂಸ್ಕೃತ ಬೋಧನೆ ಇದೆ ಎಂದರು.

ಸಂಸ್ಕೃತ ಭಾಷೆಯ ಮೇಲೆ ಕೆಲವು ಆಕ್ಷೇಪಗಳಿವೆ. ಸಂಸ್ಕೃತ ಮಾತೃಭಾಷೆಯಾಗಿದೆ ಎಂಬುದನ್ನು ಯಾರೂ ನಂಬುವುದಿಲ್ಲ. ಆದರೆ, ಇಂತಹ ನಿದರ್ಶನಗಳಿವೆ. ಸಂಸ್ಕೃತ ಪಂಡಿತರೆ ಸಂಸ್ಕೃತದಲ್ಲಿ ಸಂಭಾಷಣೆ ಮಾಡದೇ ಇದ್ದರೆ, ಸಮಾಜವು ಸಂಸ್ಕೃತ ಮರೆತು ಬಿಡುತ್ತದೆ ಎಂದು ಹೇಳಿದರು.

ಮಾನವನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿಯೇ ಮುಳುಗಿದ್ದಾನೆ. ಮಾನವನಂತೆ ಭಾಷೆಗಳ ನಡುವೆಯೂ ಕೊಡುಕೊಳ್ಳುವಿಕೆ ಆಗುತ್ತದೆ. ಸಂಸ್ಕೃತ ಭಾಷೆಯ ಕೊಡುಗೆ ದೊಡ್ಡದು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.

ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ರಮಾನಂದ ಭಟ್, ಡಾ.ವಿನಾಯಕ ಭಟ್ ಗಾಳಿಮನೆ ಇದ್ದರು. ಡಾ. ವಿನಾಯಕ ಭಟ್ ಸ್ವಾಗತಿಸಿ, ಡಾ.ರಮಾನಂದ ಭಟ್ ವಂದಿಸಿದರು, ಸಿಂಧೂ ಭಟ್ ನಿರೂಪಿಸಿದರು.  







Ads on article

Advertise in articles 1

advertising articles 2

Advertise under the article

ಸುರ