-->

ನಡು ರಸ್ತೆಯಲ್ಲಿಯೇ ಯುವತಿಯನ್ನು ಕತ್ತು ಸೀಳಿ ಹತ್ಯೆಗೈದು ವಿಷ ಸೇವಿಸಿದ್ದ ಸೈಕೋ ಕಿಲ್ಲರ್ ಆಸ್ಪತ್ರೆಯಲ್ಲಿ ಸಾವು

ನಡು ರಸ್ತೆಯಲ್ಲಿಯೇ ಯುವತಿಯನ್ನು ಕತ್ತು ಸೀಳಿ ಹತ್ಯೆಗೈದು ವಿಷ ಸೇವಿಸಿದ್ದ ಸೈಕೋ ಕಿಲ್ಲರ್ ಆಸ್ಪತ್ರೆಯಲ್ಲಿ ಸಾವು


ದಾವಣಗೆರೆ: ವಿವಾಹ ನಿಶ್ಚಿತಾರ್ಥಗೊಂಡಿದ್ದ ಯುವತಿಯನ್ನು ಹಾಡಹಗಲೇ ರಸ್ತೆಯಲ್ಲಿ ಕತ್ತುಸೀಳಿ ಕೊಲೆಗೈದು ವಿಷ ಸೇವಿಸಿದ್ದ ಆರೋಪಿ ಯುವಕ ಸಾದಾತ್ ಅಲಿಯಾಸ್ ಚಾಂದ್ ಪೀರ್ ಕೂಡಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ನಗರ ಪಿ.ಜೆ. ಬಡಾವಣೆಯ ಚರ್ಚ್ ಬಳಿ ಗುರುವಾರ ಹಾಡು ಹಗಲೇ ಚಾಂದ್ ಸುಲ್ತಾನ್(28) ಎಂಬಾಕೆಯನ್ನು ಸಾದತ್ ಚಾಕುನಿಂದ ಕತ್ತು ಸೀಳಿ ಕೊಲೆಗೈದಿದ್ದ. ಕೊಲೆಯ ಬಳಿಕ ಆರೋಪಿ ಸಾದಾತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ವಿಚಾರ ತಿಳಿದು ಪೊಲೀಸರು ಆತನನ್ನು ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆತ ಚಿಕಿತ್ಸೆ ಫಲಿಸದೇ ಆತ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಚಾಂದ್ ಸುಲ್ತಾನ ಕಡುಬಡತನದಲ್ಲಿ ಹುಟ್ಟಿ ಕಷ್ಟ ಪಟ್ಟು ಓದಿ ಎಂಕಾಂ ಪದವಿ ಪಡೆದಿದ್ದಳು. ಬಳಿಕ ನಗರದ ತೆರಿಗೆ ಸಲಹೆಗಾರ ಕೆ. ಮಹ್ಮದ್ ಭಾಷಾ ಅವರಲ್ಲಿ ಸಿ.ಎ. ಪದವಿಗೆ ತರಬೇತಿ ಪಡೆಯುತ್ತಿದ್ದಳು. ಪ್ರತಿಭಾವಂತೆಯಾದ ಚಾಂದ್ ಸುಲ್ತಾನಾಳ ಮದುವೆ ಮುಂದಿನ ತಿಂಗಳ ಆಕೆಯ ಸಹೋದ್ಯೋಗಿಯೊಂದಿಗೆ ನಿಶ್ಚಯವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಮದುವೆ ಸಂಭ್ರಮದಲ್ಲಿದ್ದ ಆಕೆಯನ್ನು ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬ ಸೈಕೋ ಕಿರಾತಕ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಚಾಂದ್ ಸುಲ್ತಾನಾಳನ್ನು ಮಾತನಾಡಿಸುವ ನೆಪದಲ್ಲಿ ಬಂದ ಆತ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. 

ಆರೋಪಿ ಸಾದತ್, ಮೃತ ಯುವತಿಗೆ ಸೋದರ ಸಂಬಂಧಿಯಾಗಿದ್ದ. ಐದು ವರ್ಷಗಳ ಹಿಂದೆ ಇವರಿಬ್ಬರಿಗೆ ಮದುವೆ ಮಾಡಲು ಮೃತ ಯುವತಿ ಮನೆಯವರು ನಿರ್ಧಾರಿಸಿದ್ದರು. ಅದರಂತೆ ಆಕೆಯ ಕುಟುಂಬಸ್ಥರು ಸಾದತ್ ಮನೆಗೆ ಹೋಗಿ ಆತನ ಕುಟುಂಬದ ಸದಸ್ಯರೊಂದಿಗೆ ಮದುವೆ ಪ್ರಸ್ತಾಪವನ್ನು ಅವರ ಮುಂದಿಟ್ಟಿದ್ದರು. ಈ ವೇಳೆ ಸಾದತ್ ಹಾಗೂ ಆತನ ಮನೆಯವರು ಈ ಮದುವೆಗೆ ಸಮ್ಮತಿ ನೀಡಿರಲಿಲ್ಲ. ಇದೀಗ ಚಾಂದ್ ಸುಲ್ತಾನಾಳ ಮದುವೆಯನ್ನು ಆಕೆಯ ಸಹೋದ್ಯೋಗಿಯೊಂದಿಗೆ ನಿಶ್ಚಯಿಸಿದ್ದರು.

ಆದರೆ ಕಳೆದ ಕೆಲ ತಿಂಗಳುಗಳಿಂದ ಆರೋಪಿ ಸಾದತ್ 'ನೀನು ನನ್ನನ್ನೇ ಮದುವೆಯಾಗಬೇಕು' ಎಂದು ಮೃತ ಯುವತಿ ಚಾಂದ್ ಸುಲ್ತಾನಳ ಹಿಂದೆ ಬಿದ್ದಿದ್ದಾನೆ. ಈ ಬಗ್ಗೆ ಆಕೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಮುಂದಿನ ತಿಂಗಳು ನಡೆಯಬೇಕಿದ್ದ ತನ್ನ ಮದುವೆಯತ್ತ ಗಮನಹರಿಸಿದ್ದಳು. ಆದರೆ ಇಂದು ಏಕಾಏಕಿ ಚಾಂದ್ ಸುಲ್ತಾನಾಳನ್ನು ಕತ್ತು ಸೀಳಿ, ಸಾದತ್ ಕೊಲೆ ಮಾಡಿದ್ದಾನೆ.

ಆರೋಪಿ ಸಾದತ್ ತನ್ನ ಮನೆಯಲ್ಲಿ ಚಾಂದ್ ಸುಲ್ತಾನಾಳನ್ನು ಹತ್ಯೆ ಮಾಡುವುದಾಗಿ ಹೇಳಿ ಹೊರಟಿದ್ದ. ಈ ವಿಚಾರವನ್ನು ಆರೋಪಿ ಕುಟುಂಬಸ್ಥರು ಚಾಂದ್ ಸುಲ್ತಾನ ಸಂಬಂಧಿಕರಿಗೆ ತಿಳಿಸಿದ್ದಾರೆ. ಆದರೆ ಇದು ಚಾಂದ್ ಸುಲ್ತಾನಾಳನ್ನು ತಲುಪುವ ಮೊದಲೇ ಆರೋಪಿ ತನ್ನ ಕೆಲಸ ಮಾಡಿ ಪೂರೈಸಿದ್ದ.

ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article