-->

ಇವರೆಂಥಹಾ ಅಕ್ಕಂದಿರು...! ಒಡಹುಟ್ಟಿದ ತಮ್ಮನನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿದರೇ

ಇವರೆಂಥಹಾ ಅಕ್ಕಂದಿರು...! ಒಡಹುಟ್ಟಿದ ತಮ್ಮನನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿದರೇ

ಕಲಬುರಗಿ: ತಮ್ಮ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾನೆಂದು ಒಡಹುಟ್ಟಿದ ತಮ್ಮನನ್ನೇ ಅಕ್ಕಂದಿರು ಬಾಡಿಗೆ ಹಂತಕರ ಮೂಲಕ ಹತ್ಯೆ ಮಾಡಿಸಿರುವ ನಿಗೂಢ ಪ್ರಕರಣವನ್ನು ಕಲಬುರಗಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ ಹತ್ಯೆಗೆ ಸುಪಾರಿ ನೀಡಿರುವ ಗಂಡಂದಿರಿಂದ ಬೇರ್ಪಟ್ಟಿದ್ದ ಇಬ್ಬರು ಸಹೋದರಿಯರು ಹಾಗೂ ನಾಲ್ವರು ಬಾಡಿಗೆ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. 

ಅನಿತಾ ಹಾಗೂ ಮೀನಾಕ್ಷಿ ಬಂಧಿತ ಸಹೋದರಿಯರು. ಅವಿನಾಶ್ , ಆಸಿಫ್ , ರೋಹಿತ್ ಹಾಗೂ ಮೊಯ್ದಿನ್ ಬಂಧಿತ ಸುಪಾರಿ ಹಂತಕರು.

ಜುಲೈ 29ರಂದು ಕಲಬುರಗಿಯ ಗಾಜಿಪುರ ನಿವಾಸಿ ನಾಗರಾಜ್ ಮಟಮಾರಿ(29) ಎಂಬಾತನ ನಿಗೂಢ ಹತ್ಯೆಯಾಗಿತ್ತು. ಆತನ ಮೃತದೇಹ ಅಳಂದ ರಸ್ತೆಯ ಭೋಸಗಾ ಕ್ರಾಸ್ ಬಳಿ ಪತ್ತೆಯಾಗಿತ್ತು. ದೊಡ್ಡ ಕಲ್ಲು ಹೊತ್ತುಹಾಕಿ ತಲೆಯನ್ನು ಜಜ್ಜಿ ಹತ್ಯೆ ಮಾಡಲಾಗಿತ್ತು. ಬಹಳಷ್ಟು ಹಿಂದೆಯೇ ಅನಿತಾ ಹಾಗೂ ಮೀನಾಕ್ಷಿ ತಮ್ಮ ಗಂಡಂದಿರಿಂದ ಬೇರ್ಪಟ್ಟಿದ್ದರು. ಇವರು ತಮ್ಮ ಸಹೋದರ ನಾಗರಾಜ್ ಹಾಗೂ ತಾಯಿಯೊಂದಿಗೆ ಕಲಬುರಗಿಯಲ್ಲಿ ವಾಸವಿದ್ದರು. ಆದರೆ ಗಂಡಂದಿರನ್ನು ತೊರೆದ ಬಳಿಕ ಸಹೋದರಿಯರು ಹಲವು ಪ್ರೇಮಸಂಬಂಧಗಳಲ್ಲಿ ಸಿಲುಕಿದ್ದನ್ನು ಸಹೋದರ ನಾಗರಾಜ್ ಆಕ್ಷೇಪಿಸಿದ್ದ ಎನ್ನಲಾಗಿದೆ. ತಮ್ಮನ ಸಲಹೆಯನ್ನು ತಿರಸ್ಕರಿಸಿರುವ ಇಬ್ಬರೂ ಮನೆ ತೊರೆದು ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದರು.

ಆದರೆ ತಮ್ಮನ ಹಸ್ತಕ್ಷೇಪವನ್ನು ಸಹಿಸದ ಅವರು ಆತನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಸುಪಾರಿ ಹಂತಕರು ನಾಗರಾಜ್ ನನ್ನು ಆಟೊರಿಕ್ಷಾದಲ್ಲಿ ಕತ್ತು ಸೀಳಿ ಕೊಲೆಗೈದು ಬಳಿಕ ನಗರದ ಹೊರವಲಯದಲ್ಲಿ ಎಸೆದು ಪರಾರಿಯಾಗಿದ್ದರು. ಮರುದಿನ ಪೊಲೀಸರು ಈ ಬಗ್ಗೆ ಸಹೋದರಿಯರಿಗೆ ಮಾಹಿತಿ ನೀಡಿದ್ದರು. ತನಿಖೆಯಲ್ಲಿ ಸಹೋದರಿಯರು ಸುಪಾರಿ ಹಂತಕರಿಗೆ ದೂರವಾಣಿ ಕರೆ ಮಾಡಿರುವ ಆಧಾರದಲ್ಲಿ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

Ads on article

Advertise in articles 1

advertising articles 2

Advertise under the article