-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಹಳೆಯಂಗಡಿ: ಕಾರಿನಲ್ಲಿದ್ದ ದುಬಾರಿ ಬೆಳೆಯ ಮೊಬೈಲ್, ನಗದು ಕಳವು!

ಹಳೆಯಂಗಡಿ: ಕಾರಿನಲ್ಲಿದ್ದ ದುಬಾರಿ ಬೆಳೆಯ ಮೊಬೈಲ್, ನಗದು ಕಳವು!

ಹಳೆಯಂಗಡಿ: ಇಲ್ಲಿನ ಪಂಡಿತ್ ಹರಿಭಟ್‌ ರಸ್ತೆಯ ನಿವಾಸಿ ಅನ್ವರ್ ಎಂಬವರು ಕಾರಿನಲ್ಲಿಟ್ಟಿದ್ದ ದುಬಾರಿ ಬೆಲೆಯ ಮೊಬೈಲ್ ಹಾಗೂ ನಗದು ಕಳವು ಆಗಿರುವ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನ್ವರ್ ಅವರು ತಮ್ಮ ಮನೆಯ ಹಿಂಭಾಗದಲ್ಲಿದ್ದ ಶೆಡ್ ನಲ್ಲಿ ಕಾರ್ ಅನ್ನು ಪಾರ್ಕ್ ಮಾಡಿದ್ದರು‌. ಆದರೆ ಅವರ ಬೆಲೆಬಾಳುವ ಮೊಬೈಲ್‌ ಮತ್ತು ಪರ್ಸ್‌ನಲ್ಲಿ 10 ಸಾವಿರ ರೂ.‌ ಕಾರಿನೊಳಗಡೆ ಇಡಲಾಗಿತ್ತು. ಕಾರು ಬಾಗಿಲು ತೆಗೆದು ಹಳೆಯಂಗಡಿ ಇಂದಿರಾನಗರ ನಿವಾಸಿ‌ ಶಂಸುದ್ದೀನ್ ಮೊಬೈಲ್ ಹಾಗೂ ಪರ್ಸ್ ನಲ್ಲಿದ್ದ 10 ಸಾವಿರ ರೂ. ಕಳವುಗೈದಿದ್ದಾನೆ.

ಈತನ ಕೈಚಳಕದ ಕೃತ್ಯ ಅನ್ವರ್‌ ಅವರ‌ ಮನೆಯ‌ ಸಿಸಿ‌ ಟಿವಿಯಲ್ಲಿ ದಾಖಲಾಗಿದೆ‌. ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧಾರಿಸಿ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ‌ಕೊಂಡು ಆರೋಪಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ