-->

ತಲಪಾಡಿ: ದಾರಿಯಲ್ಲಿ ದೊರಕಿರುವ 1 ಲಕ್ಷ ರೂ. ಚಿನ್ನದ ಬ್ರಾಸ್ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಶೀರ್ ಅಹ್ಮದ್

ತಲಪಾಡಿ: ದಾರಿಯಲ್ಲಿ ದೊರಕಿರುವ 1 ಲಕ್ಷ ರೂ. ಚಿನ್ನದ ಬ್ರಾಸ್ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಶೀರ್ ಅಹ್ಮದ್


ತಲಪಾಡಿ: ದಾರಿಯಲ್ಲಿ ಸಿಕ್ಕಿದ್ದ ಸುಮಾರು 1 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನದ ಬ್ರಾಸ್ಲೈಟ್ ಅನ್ನು ವಾರಸುದಾರರಿಗೆ ತಲುಪಿಸಿ ವ್ಯಕ್ತಿಯೋರ್ವರು ಪ್ರಾಮಾಣಿಕತೆ ಮೆರೆದ ಘಟನೆ ತಲಪಾಡಿಯಲ್ಲಿ ನಡೆದಿದೆ. 

ತಲಪಾಡಿ ಗ್ರಾಮದ ತಚ್ಚಾನಿ ರಸ್ತೆಯಲ್ಲಿ ಬಶೀರ್ ಅಹ್ಮದ್ ಉದ್ಯಾವರ ಎಂಬುವವರಿಗೆ ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನದ ಬ್ರಾಸ್ಲೈಟ್ ದೊರಕಿತ್ತು. ತಕ್ಷಣ ಅವರು ವಾಟ್ಸ್ಆ್ಯಪ್ ಮೂಲಕ ಬ್ರಾಸ್ಲೈಟ್ ದೊರಕಿರುವ ಬಗ್ಗೆ ಪ್ರಚಾರಪಡಿಸಿದ್ದರು‌. ಈ ಮೂಲಕ ಬ್ರಾಸ್ಲೈಟ್ ನ ವಾರಸುದಾರ ಮೋಹನ್ ಮಾಡ ಅವರನ್ನು ಪತ್ತೆ ಹಚ್ಚಲಾಯಿತು. ಇಂದು ತಲಪಾಡಿ ಗ್ರಾಮದ ಎಸ್ ಡಿಪಿಐ ಪಕ್ಷದ ಕಚೇರಿಯಲ್ಲಿ ಈ ಬ್ರಾಸ್ಲೈಟ್ ಅನ್ನು ಹಸ್ತಾಂತರಿಸಲಾಯಿತು.

ಬಶೀರ್ ಅಹ್ಮದ್ ರವರ ಮಾನವೀಯ ಗುಣವನ್ನು ಮೆಚ್ಚಿರುವ ಮೋಹನ್ ಮಾಡ ಅವರು ಬಶೀರ್ ಅಹ್ಮದ್ ಉದ್ಯಾವರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬಹುಮಾನವನ್ನು ನೀಡಿದರು.

Ads on article

Advertise in articles 1

advertising articles 2

Advertise under the article