-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತಲಪಾಡಿ: ದಾರಿಯಲ್ಲಿ ದೊರಕಿರುವ 1 ಲಕ್ಷ ರೂ. ಚಿನ್ನದ ಬ್ರಾಸ್ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಶೀರ್ ಅಹ್ಮದ್

ತಲಪಾಡಿ: ದಾರಿಯಲ್ಲಿ ದೊರಕಿರುವ 1 ಲಕ್ಷ ರೂ. ಚಿನ್ನದ ಬ್ರಾಸ್ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಶೀರ್ ಅಹ್ಮದ್


ತಲಪಾಡಿ: ದಾರಿಯಲ್ಲಿ ಸಿಕ್ಕಿದ್ದ ಸುಮಾರು 1 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನದ ಬ್ರಾಸ್ಲೈಟ್ ಅನ್ನು ವಾರಸುದಾರರಿಗೆ ತಲುಪಿಸಿ ವ್ಯಕ್ತಿಯೋರ್ವರು ಪ್ರಾಮಾಣಿಕತೆ ಮೆರೆದ ಘಟನೆ ತಲಪಾಡಿಯಲ್ಲಿ ನಡೆದಿದೆ. 

ತಲಪಾಡಿ ಗ್ರಾಮದ ತಚ್ಚಾನಿ ರಸ್ತೆಯಲ್ಲಿ ಬಶೀರ್ ಅಹ್ಮದ್ ಉದ್ಯಾವರ ಎಂಬುವವರಿಗೆ ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನದ ಬ್ರಾಸ್ಲೈಟ್ ದೊರಕಿತ್ತು. ತಕ್ಷಣ ಅವರು ವಾಟ್ಸ್ಆ್ಯಪ್ ಮೂಲಕ ಬ್ರಾಸ್ಲೈಟ್ ದೊರಕಿರುವ ಬಗ್ಗೆ ಪ್ರಚಾರಪಡಿಸಿದ್ದರು‌. ಈ ಮೂಲಕ ಬ್ರಾಸ್ಲೈಟ್ ನ ವಾರಸುದಾರ ಮೋಹನ್ ಮಾಡ ಅವರನ್ನು ಪತ್ತೆ ಹಚ್ಚಲಾಯಿತು. ಇಂದು ತಲಪಾಡಿ ಗ್ರಾಮದ ಎಸ್ ಡಿಪಿಐ ಪಕ್ಷದ ಕಚೇರಿಯಲ್ಲಿ ಈ ಬ್ರಾಸ್ಲೈಟ್ ಅನ್ನು ಹಸ್ತಾಂತರಿಸಲಾಯಿತು.

ಬಶೀರ್ ಅಹ್ಮದ್ ರವರ ಮಾನವೀಯ ಗುಣವನ್ನು ಮೆಚ್ಚಿರುವ ಮೋಹನ್ ಮಾಡ ಅವರು ಬಶೀರ್ ಅಹ್ಮದ್ ಉದ್ಯಾವರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬಹುಮಾನವನ್ನು ನೀಡಿದರು.

Ads on article

Advertise in articles 1

advertising articles 2

Advertise under the article

ಸುರ