-->

UDUPI: ಖಿನ್ನತೆಯಿಂದ ಶಿಕ್ಷಕಿ ನೇಣಿಗೆ ಶರಣು

UDUPI: ಖಿನ್ನತೆಯಿಂದ ಶಿಕ್ಷಕಿ ನೇಣಿಗೆ ಶರಣು

ಉಡುಪಿ: ಖಿನ್ನತೆಗೊಳಗಾಗಿರುವ ಶಿಕ್ಷಕಿಯೋರ್ವರು ನೇಣಿಗೆ ಶರಣಾದ ಘಟನೆ ಮೂಡು ಅಲೆವೂರು ಎಂಬಲ್ಲಿ ನಡೆದಿದೆ.

ಅಲೆವೂರು ನಿವಾಸಿ ಅಮೃತಾ ಮೃತಪಟ್ಟ ಶಿಕ್ಷಕಿ.


ಅಮೃತಾ ಅವರು ಕಳೆದ 8 ವರ್ಷಗಳಿಂದ ಖಾಸಗಿ ಸ್ಕೂಲ್ ಒಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು‌. ಆದರೆ ಇತ್ತೀಚೆಗೆ ಯಾವುದೋ ಕಾರಣಕ್ಕೆ ಅವರು ಖಿನ್ನತೆಗೆ ಒಳಗಾಗಿದ್ದಾರೆ‌ ಎನ್ನಲಾಗಿದೆ.

ತಮ್ಮ ಮನದಲ್ಲಿರುವ ಚಿಂತೆಗೆ ಪರಿಹಾರ ದೊರಕದ ಹಿನ್ನೆಲೆಯಲ್ಲಿ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article