-->

Mangaluru: ಇನ್ಶೂರೆನ್ಸ್ ಕಂಪೆನಿಯಿಂದ 12ಲಕ್ಷ ರೂ. ಸಾಲ ಕೊಡುವುದಾಗಿ ಹೇಳಿ ವ್ಯಕ್ತಿಗೆ 1.25 ಲಕ್ಷ ರೂ. ವಂಚನೆ

Mangaluru: ಇನ್ಶೂರೆನ್ಸ್ ಕಂಪೆನಿಯಿಂದ 12ಲಕ್ಷ ರೂ. ಸಾಲ ಕೊಡುವುದಾಗಿ ಹೇಳಿ ವ್ಯಕ್ತಿಗೆ 1.25 ಲಕ್ಷ ರೂ. ವಂಚನೆ

ಮಂಗಳೂರು: ಇನ್ಶೂರೆನ್ಸ್ ಕಂಪೆನಿಯಿಂದ ಕರೆ ಮಾಡಿರುವ ಅಪರಿಚಿತನೋರ್ವ 12 ಲಕ್ಷ ರೂ. ಸಾಲ ನೀಡುವುದಾಗಿ ಹೇಳಿ 1,25,400 ರೂ. ವಂಚನೆಗೈದಿರುವುದಾಗಿ ಮಂಗಳೂರಿನ ವ್ಯಕ್ತಿಯೋರ್ವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೋಸ ಹೋಗಿರುವ ವ್ಯಕ್ತಿಗೆ 2021 ಅಕ್ಟೋಬರ್ 19ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಕರೆ ಬಂದಿತ್ತು. ಆದಿತ್ಯ ಬಿರ್ಲಾ ಫಿನಾನ್ಸ್ ಕಂಪೆನಿಯ ಸಿಬ್ಬಂದಿ ಎಂದು ಹೇಳಿರುವ ಅಪರಿಚಿತ ವ್ಯಕ್ತಿಯು, ಮತ್ತೋರ್ವನಿಗೆ ಕಾನ್ಫರೆನ್ಸ್ ಕಾಲ್ ಕನೆಕ್ಟ್ ಮಾಡಿದ್ದಾನೆ. 

ಆತನು ತಮಗೆ 12 ಲಕ್ಷ ರೂ. ಸಾಲವನ್ನು ಕಂಪೆನಿಯಿಂದ ಕೊಡುವುದಾಗಿ ತಿಳಿಸಿದ್ದಾನೆ. ಅದಕ್ಕೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಅನ್ನು ವಾಟ್ಸ್ಆ್ಯಪ್ ಮಾಡಬೇಕೆಂದು ತಿಳಿಸಿದ್ದಾನೆ. ಬಳಿಕ ಮತ್ತೋರ್ವ ಅಪರಿಚಿತ ಕರೆ ಮಾಡಿ ಭಾರತೀಯ ಅಕ್ಸ ಇನ್ಸೂರೆನ್ಸ್ ಪಾಲಿಸಿ ಬಾಂಡ್ ಅನ್ನು ಆದಿತ್ಯ ಬಿರ್ಲಾ ಫಿನಾನ್ಸ್ ಕಂಪೆನಿ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕೆಂದು ತಿಳಿಸಿದ್ದಾನೆ. ಇವರು ಅದರಂತೆ ಮಾಡಿದ್ದಾರೆ‌.

ಬಳಿಕ ಅ.23ರಂದು ಭಾರತೀಯ ಅಕ್ಸ ಇನ್ಸೂರೆನ್ಸ್ ಸಿಬ್ಬಂದಿ ಎಂದು ಕರೆ ಮಾಡಿರುವಾತ ಆರು ತಿಂಗಳ ಪ್ರೀಮಿಯಂ 60,000 ರೂ. ಹಾಗೂ ಜಿಎಸ್ಟಿ 2,700 ರೂ. ಪಾವತಿಸುವಂತೆ ತಿಳಿಸಿ ಲಿಂಕ್ ಅನ್ನು ಕಳುಹಿಸಿದ್ದಾನೆ. ಆ ಲಿಂಕ್ ಅನ್ನು ಒಪನ್ ಮಾಡಿ ತನ್ನ ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಂದ 22,700 ರೂ. ಹಾಗೂ ಐಡಿಎಫ್ ಸಿ ಕ್ರೆಡಿಟ್ ಕಾರ್ಡ್ ನಿಂದ 40,000 ರೂ. ಪಾವತಿ ಮಾಡಿದ್ದರು. 

ಅ.28ರಂದು ವ್ಯಕ್ತಿಯೋರ್ವನು ಕರೆ ಮಾಡಿ ವರ್ಷದ ಪ್ರೀಮಿಯಂ ಪಾವತಿಸಿದರೆ ಸಾಲ ನೀಡುವುದಾಗಿ ತಿಳಿಸಿರುತ್ತಾರೆ. ಅದಕ್ಕೆ ಮತ್ತೆ ಲಿಂಕ್ ಕಳಿಸಿದ್ದು, ಮತ್ತೆ 62,700 ರೂ. ಪಾವತಿ ಮಾಡಿದ್ದರು. ಹೀಗೆ ಹಂತ ಹಂತವಾಗಿ ಒಟ್ಟು 1,25,400 ರೂ. ಹಣ ಪಾವತಿ ಮಾಡಿದ್ದರೂ, ಸಾಲ ಕೊಡದೆ ಮೋಸ ಮಾಡಿರುವುದಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ಮೋಸ ಹೋಗಿರುವ ವ್ಯಕ್ತಿ ದೂರು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article