-->

ಮಂಗಳೂರಿನ ಲಾಡ್ಜ್ ನಲ್ಲಿ  ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ನಡೆಯಿತು MURDER- ಗೆಳೆಯನಿಂದಲೆ ಹತ್ಯೆಯಾದ!

ಮಂಗಳೂರಿನ ಲಾಡ್ಜ್ ನಲ್ಲಿ ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ನಡೆಯಿತು MURDER- ಗೆಳೆಯನಿಂದಲೆ ಹತ್ಯೆಯಾದ!


ಮಂಗಳೂರು; ಮಂಗಳೂರಿನಲ್ಲಿ ದಸರಾ ವೇಳೆ ಪಾರ್ಟಿ ಮಾಡುತ್ತಿದ್ದ ಗೆಳೆಯರ ಮಧ್ಯೆ ಘರ್ಷಣೆ ಆಗಿ ಓರ್ವ ಹತ್ಯೆಯಾಗಿದ್ದಾನೆ.


ನಿನ್ನೆ ರಾತ್ರಿ  ಪಂಪವೆಲ್ ಬಳಿಯ ಸಾಯಿ ಪ್ಯಾಲೇಸ್ ಎಂಬ ಲಾಡ್ಜ್ ನಲ್ಲಿ ಆರು ಮಂದಿ ಗೆಳೆಯರು ಪಾರ್ಟಿ ಮಾಡಲು ಬಂದಿದ್ದರು.
 ಪ್ರಮೀತ್, ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ್ ಮತ್ತು  ಪ್ರಜ್ವಲ್  ಎಂಬವರು ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡಲು ಸೇರಿದ್ದರು.

 ರಾತ್ರಿ 2 ಗಂಟೆಗೆ ಜೇಸನ್ ಸುರತ್ಕಲ್  ಮತ್ತು ಧನುಷ್ ಪಚ್ಚನಾಡಿ ಎಂಬುವರ ಮಧ್ಯೆ ಜಗಳವಾಗಿದೆ. ಈ ವೇಳೆ ಜೇಸನ್ ಸುರತ್ಕಲ್  ಹರಿತವಾದ ಆಯುಧದಿಂದ  ಧನುಷ್ ಗೆ ಚುಚ್ಚಿದ್ದಾನೆ.





 ತೀವ್ರವಾಗಿ ಗಾಯಗೊಂಡ ಧನುಷ್ ನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕೊಂಡು ಹೋದಾಗ ಆತ ಮೃತಪಟ್ಟಿರುವದು ದೃಡಪಟ್ಟಿದೆ. ಕಂಕನಾಡಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article