-->

SHOCKING NEWS: ಸಾಂಪ್ರದಾಯಿಕ ಹಬ್ಬ ಆಚರಣೆ ವೇಳೆ ದುರ್ಘಟನೆ- 7 ಅಪ್ರಾಪ್ತ  ಬಾಲಕಿಯರು ಸಾವು!

SHOCKING NEWS: ಸಾಂಪ್ರದಾಯಿಕ ಹಬ್ಬ ಆಚರಣೆ ವೇಳೆ ದುರ್ಘಟನೆ- 7 ಅಪ್ರಾಪ್ತ ಬಾಲಕಿಯರು ಸಾವು!




ಲತೇಹಾರ್: ಜಾರ್ಖಂಡ್ ರಾಜ್ಯದ ಸಾಂಪ್ರದಾಯಿಕ ಹಬ್ಬ ಆಚರಣೆ ಸಂದರ್ಭದಲ್ಲಿ ನದಿ ನೀರಿನಲ್ಲಿ ಮುಳುಗಿ 7 ಅಪ್ರಾಪ್ತ ಬಾಲಕಿಯರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ ರಾಜ್ಯದ ಲತೇಹಾರ್​ನಲ್ಲಿ ನಡೆದಿದೆ.

ಜಾರ್ಖಂಡ್​ನಲ್ಲಿ ಸಾಂಪ್ರದಾಯಿಕ ಹಬ್ಬವಾಗಿ ಕರ್ಮ ಎಂಬ ಆಚರಣೆ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಕರ್ಮ ವಿಸರ್ಜನೆ ಮಾಡಲು ಹೋದ ವೇಳೆ ನದಿಯಲ್ಲಿ ಈ ಅವಘಡ ಸಂಭವಿಸಿದೆ. 

ಘಟನೆಯಲ್ಲಿ ರೀನಾ ಕುಮಾರಿ (11), ಸುನಿತಾ ಕುಮಾರಿ (17) ರೇಖಾ ಕುಮಾರಿ(18), ಲಕ್ಷ್ಮಿ ಕುಮಾರಿ (8),  ಮೀನಾ ಕುಮಾರಿ (8), ಸುಷ್ಮಾ ಕುಮಾರಿ (7),
ಪಿಂಕಿ ಕುಮಾರಿ (15),   ಸಾವನ್ನಪ್ಪಿದ್ದಾರೆ.
ಇವರು ಲತೇಹಾರ್ ನ ಶೇರೆಗಡಾ ಗ್ರಾಮದ ನಿವಾಸಿಗಳು ಆಗಿದ್ದಾರೆ .

ಜಾರ್ಖಂಡ್​ನ ಬುಡಕಟ್ಟು ಜನಾಂಗವು ಸಹೋದರರು ಆರೋಗ್ಯವಾಗಿ ಜೀವನ ನಡೆಸಲಿ ಎಂಬ ಉದ್ದೇಶದಿಂದ
 ಸಾಂಪ್ರದಾಯಿಕ ವಿಶೇಷ ಹಬ್ಬ( ಕರ್ಮ ವಿಸರ್ಜನೆ) ಎಂಬ ಆಚರಣೆ ಮಾಡುತ್ತದೆ.   ಜಮೀನಿನಲ್ಲಿ ಬೆಳೆದವುಗಳನ್ನು  ಪೂಜಿಸಿ ಅವುಗಳನ್ನು ನದಿಯಲ್ಲಿ ವಿಸರ್ಜನೆ ಮಾಡುವುದು‌ ಸಂಪ್ರದಾಯ. ಈ  ಆಚರಣೆಯ ವೇಳೆ ಎಲ್ಲ ಬಾಲಕಿಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

 ನದಿ‌ ನೀರಿನಲ್ಲಿ ಮುಳುಗಿದ ಎಲ್ಲ ಬಾಲಕಿಯರ ಮೃತದೇಹ ಹೊರತೆಗೆಯುವಲ್ಲಿ ಮುಳುಗುತಜ್ಞರು ಮತ್ತು ಪೊಲೀಸರು ಯಶಸ್ವಿಯಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

 

Ads on article

Advertise in articles 1

advertising articles 2

Advertise under the article