ರಾಜ್ಯ ಸರ್ಕಾರ ಘೋಷಿಸಿದ ಲಾಕ್ ಡೌನ್ ಸಂದರ್ಭದಲ್ಲಿ ತುರ್ತು ಕೆಲಸ, ವೈದ್ಯಕೀಯ ಸೇವೆ ನೀಡುವ ಅಥವಾ ಇತರ ಯಾವುದೇ ಅಗತ್ಯ ಸಂಬಂಧ ತೆರಳುವಾಗ ಪೊಲೀಸರು ತಡೆದು ಹಲ್ಲೆ ಮಾಡಿದ್ದರೆ ಸಂತ್ರಸ್ತರು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಲಿಖಿತವಾಗಿ ದೂರು ಸಲ್ಲಿಸಬಹುದು.
ಆ ಸಂದರ್ಭದ ಹಲ್ಲೆ ಮಾಡುವ ದೃಶ್ಯಗಳು ಇದ್ದರೆ, ಆ ದೃಶ್ಯ ಸಹಿತ ದೂರಿನೊಂದಿಗೆ ರಾಜ್ಯ ಮಾನವ ಹಕ್ಕು ಅಯೊಗಕ್ಕೆ ಸಲ್ಲಿಸಬಹುದು.
ದೂರು ನೀಡಿದ ಕೂಡಲೇ ತಪ್ಪಿಸ್ಥರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಆಯೋಗದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗಾಗಿ : 080-22392200 ಸಂಪರ್ಕಿಸಿ.
E-Mail: registrar-kshrc@karnataka.gov.in ಅಥವಾ ಶುಲ್ಕರಹಿತ ಸಹಾಯವಾಣಿ: 180042523333 ಸಂಪರ್ಕಿಸಿ ದೂರು ಸಲ್ಲಿಸಬಹುದು.
