-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಈ ಬೇರು ನೀರಿನಲ್ಲಿ ಹಾವಿನಂತೆ ಸಂಚರಿಸುತ್ತದೆ: ವಿಜ್ಞಾನಕ್ಕೇ ಸವಾಲೆಸುವ ಗರುಡ ಸಂಜೀವಿನಿ ಬೇರಿನ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಈ ಬೇರು ನೀರಿನಲ್ಲಿ ಹಾವಿನಂತೆ ಸಂಚರಿಸುತ್ತದೆ: ವಿಜ್ಞಾನಕ್ಕೇ ಸವಾಲೆಸುವ ಗರುಡ ಸಂಜೀವಿನಿ ಬೇರಿನ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ



ಪ್ರಕೃತಿಯೊಂದು ವಿಸ್ಮಯ. ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ದಿನನಿತ್ಯ ಈ ಪ್ರಕೃತಿಯಲ್ಲಿ ನಡೆಯುತ್ತಲೇ ಇರುತ್ದೆ. ವಿಜ್ಞಾನಕ್ಕೇ ಸವಾಲು ಹಾಕುವ, ಯಾವ ವಿಜ್ಞಾನಿಗಳಿಂದಲೂ ಕಂಡು ಹಿಡಿಯಲು ಸಾಧ್ಯವಾಗದ ಅದೆಷ್ಟೋ ವಿಚಿತ್ರಗಳು ಈ ಪ್ರಕೃತಿಯಲ್ಲಿ ಇದೆ. ಮನುಷ್ಯ ತಾನೆಷ್ಟೇ ಬುದ್ಧಿವಂತ ಅಂದುಕೊಂಡರೂ, ಯುಗಗಳು ಎಷ್ಟೇ ಬದಲಾದರೂ ಪ್ರಕೃತಿಯ ಮುಂದೆ ಎಲ್ಲವೂ ಗೌಣವೇ. ಇದೀಗ ಇಂಥದ್ದೇ ಒಂದು ವಿಚಿತ್ರ ಗರುಡ ಸಂಜೀವಿನಿ ಎನ್ನುವ ಬೇರಿನ ಬಗ್ಗೆ ನಾವು ಹೇಳುತ್ತಿದ್ದೇವೆ.

ಸಂಜೀವಿನಿಯ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿರುವುದು ತಿಳಿದೇ ಇದೆ. ಯುದ್ಧದ ಸಂದರ್ಭ ಲಕ್ಷ್ಮಣ ಮೂರ್ಛೆ ಹೋದಾಗ, ರಾಮ ಕಂಗಾಲಾಗುತ್ತಾನೆ. ಆಗ ಅಲ್ಲಿರುವವರಲ್ಲಿ ಯಾರೋ ಹಿಮಾಲಯದ ದ್ರೋಣಗಿರಿಯಲ್ಲಿ ಸಂಜೀವಿನಿ ಪರ್ವತವಿದೆ. ಆ ಪರ್ವತದಲ್ಲಿ ಲಕ್ಷ್ಮಣನ ಪ್ರಜ್ಞೆ ಮರಳಿ ಬರುವ ಗಿಡಮೂಲಿಕೆಗಳಿದೆ. ಆದರೆ ಸೂರ್ಯಸ್ತದ ಮೊದಲು ಅದರಿಂದ ಚಿಕಿತ್ಸೆ ಕೊಡಬೇಕು ಎನ್ನುತ್ತಾರೆ. ಆ ಗಿಡಮೂಲಿಕೆಯನ್ನು ತರಲು ಹನುಮಂತ ಹೋಗುತ್ತಾನೆ. ಸಂಜೀವಿನಿ ಗಿಡ ಯಾವುದು ಎಂದು ತಿಳಿಯದಾದಾಗ ಇಡೀ ಪರ್ವತವನ್ನೇ ಹೊತ್ತು ತರುತ್ತಾನೆ ಎನ್ನುವ ಮಾತಿದೆ. ಇದರ ಬಗ್ಗೆ ವಿಭಿನ್ನ ರೀತಿಯ ನಿಲುವುಗಳಿದ್ದರೂ, ಇಲ್ಲಿ ಹೇಳುತ್ತಿರುವ ಗರುಡ ಸಂಜೀವಿನಿಯ ಬೇರು ಮಾತ್ರ  ಕುತೂಹಲವಾಗಿದೆ.

ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ದಟ್ಟ ಅರಣ್ಯಗಳಲ್ಲಿ ಕಂಡುಬರುವ ಅಪರೂಪದ ಗಿಡಮೂಲಿಕೆ ಈ ಗರುಡ ಸಂಜೀವಿನಿ ಬೇರು. ಇದು ಹಾವಿನಂತೆ ನೀರಿನಲ್ಲಿ ಚಲಿಸಬಲ್ಲುದು. ಆದರೆ ಈ ಬೇರಿನ ವಿಶೇಷತೆ ಎಂದರೆ, ಇದು ಚಲಿಸುವುದು ನೀರಿನ ವಿರುದ್ಧ ದಿಕ್ಕಿದೆ.  ಅಪಾರ ಪ್ರಮಾಣದ ಔಷಧೀಯ ಗುಣಗಳಿಂದ ತುಂಬಿರುವ ಈ ಬೇರನ್ನು ಸಾಮಾನ್ಯವಾಗಿ  ಹಾವು ಕಡಿತಗಳು ಮತ್ತು ಇತರ ಗಂಭೀರ ಒಳಹರಿವುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಬೇರಿನ ವಿಶೇಷಗಳು ಒಂದಲ್ಲ, ಎರಡಲ್ಲ. ಈ ಬೇರಿನ ಬಗ್ಗೆ ಇದಾಗಲೇ ಹಲವಾರು ರೀತಿಯ ಸಂಶೋಧನೆಗಳು ನಡೆದಿವೆ. ಆದರೆ ನೀರಿಗೆ ವಿರುದ್ಧವಾಗಿ ಚಲಿಸುವ ಅದೂ ಹಾವಿನ ರೀತಿಯಲ್ಲಿಯೇ ಹರಿಯುವ ಇಂಥ ಬೇರು ಇಲ್ಲವೇ ಇಲ್ಲ ಎಂದು ವಾದ ಮಾಡಿದವರು ಅದೆಷ್ಟೋ ಮಂದಿ. ಆದರೆ ಸೋಷಿಯಲ್​ ಮೀಡಿಯಾಗಳ ಪ್ರಭಾವದಿಂದ  ಎಲ್ಲವೂ ಸಾಬೀತಾಗಿದೆ.

ಅಂದಹಾಗೆ, ಗರುಡ ಸಂಜೀವನಿ ನೋಡಲು ಕೂಡ ಹಾವಿನ ಆಕಾರದಲ್ಲಿಯೇ ಇದೆ. ನೀರಿನಲ್ಲಿ ಹರಿಯುವ ಸಂದರ್ಭ ಥೇಟ್​ ಹಾವು ಹೋದಂತೆಯೇ ಕಾಣಿಸುತ್ತದೆ. ನೀರು ತುಂಬಿದ ಪಾತ್ರೆಯಲ್ಲಿ ಈ ಬೇರನ್ನು ಇಟ್ಟುಕೊಂಡು ಮೇಲಿನಿಂದ ಪ್ರತ್ಯೇಕವಾಗಿ ನೀರನ್ನು ಸುರಿದರೆ, ಅದು ನೀರು ಬೀಳುವ ವಿರುದ್ಧ ದಿಕ್ಕಿಗೆ ಅಂದರೆ ಮೇಲಕ್ಕೆ ಏರಲು ಪ್ರಾರಂಭಿಸುವುದನ್ನು ವಿಡಿಯೋಗಳಲ್ಲಿ ನೋಡಬಹುದು. ಇದು ಟೊಳ್ಳಾಗಿರುವ ಕಾರಣ, ಹಗುರವಾಗಿದೆ. ಇದರಿಂದಾಗಿ  ನೀರಿನಲ್ಲಿ ಮುಳುಗುವುದಿಲ್ಲ. ಇದರ ಬಗ್ಗೆ ಅಪಾರ ಪ್ರಮಾಣದ ಸಂಶೋಧನೆಗಳು ನಡೆದಿವೆ. ಇದು ನೀರಿಗೆ ವಿರುದ್ಧವಾಗಿ ಹರಿಯುವ ಕುರಿತು ಸಂಶೋಧನರು ಐಸಾಕ್​ ನ್ಯೂಟನ್​ನ ಮೂರನೇ ನಿಯಮವನ್ನು ಅಳವಡಿಸುತ್ತಾರೆ.

ನ್ಯೂಟನ್ನನ ಮೂರನೇ ನಿಯಮದ ಪ್ರಕಾರ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತವೆ.  ಅದೇ ನಟ್ ಮತ್ತು ಬೋಲ್ಟ್ ಪರಿಕಲ್ಪನೆ. ಈ ನಿಯಮದ ಪ್ರಕಾರ,  ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ವಸ್ತುಗಳ ಮೇಲೆ ಪ್ರಯೋಗವಾಗುತ್ತವೆ. ಒಂದು ವಸ್ತುವು ಮತ್ತೊಂದರ ಮೇಲೆ ಬಲ ಪ್ರಯೋಗಿಸಿದರೆ ತಕ್ಷಣವೇ ಮತ್ತೊಂದು ವಸ್ತುವು ಪ್ರತಿಕ್ರಿಯೆಯಾಗಿ ಮೊದಲನೇ ವಸ್ತುವಿನ ಮೇಲೆ ಅಷ್ಟೇ ಪ್ರಮಾಣದ ಬಲವನ್ನು ಪ್ರಯೋಗಿಸುತ್ತದೆ. ಈ ಎರಡೂ ಬಲಗಳು ಸಮವಾಗಿದ್ದರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ. ಅದೇ ರೀತಿ ಗರುಡ ಸಂಜೀವಿನಿ ಕೂಡ ಕೆಲಸ ಮಾಡುತ್ತದೆ ಎಂದು ಸಾಬೀತಾಗಿದೆ.  ನೀರಿನ ಅಲೆಗಳು ಕೆಳಗಿನಿಂದ ಮರವನ್ನು ಹೊಡೆದಾಗ ಈ ಬೇರು ತೇಲಲು ಸಹಾಯ ಮಾಡುತ್ತದೆ. ಅಲೆಗಳ ಮೂಲಕ ಬೇರಿಗೆ ಬಲವನ್ನು ಹಾಕಿದಾಗ , ಅದರಲ್ಲಿರುವ ಸುರುಳಿ ಆಕಾರದ ಕಾರಣದಿಂದಾಗಿ  ವಿರುದ್ಧ ಬಲವು ಪ್ರಯೋಗವಾಗುತ್ತದೆ. ಈ ಹಿನ್ನೆಲೆಯಲ್ಲಿ  ನೀರಿನ ದಿಕ್ಕಿಗೆ ವಿರುದ್ಧವಾಗಿ ಹರಿಯುತ್ತದೆ ಎಂದು ಹೇಳಲಾಗುತ್ತದೆ. 

Ads on article

Advertise in articles 1

advertising articles 2

Advertise under the article

ಸುರ