ಡಿಮಾರ್ಟ್ ಮಾಲಕ ರಾಧಾಕಿಶನ್ ದಮಾನಿ‌ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ್ದು ಹೇಗೆ ಗೊತ್ತಾ?


ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವುದು ಸುಲಭ ಅಲ್ಲ, ಕಷ್ಟವೂ ಅಲ್ಲ. ಸ್ವಲ್ಪ ನಷ್ಟವಾದರೂ ಜನ ಮಾರುಕಟ್ಟೆಯಿಂದ ದೂರವಾಗುತ್ತಾರೆ. ಆದರೆ ದೀರ್ಘಕಾಲ ಇರುವವರಿಗೆ ಭಾರೀ ಲಾಭ ಸಿಗುತ್ತದೆ. ಇದೇ ರೀತಿ ಒಬ್ಬರು ಷೇರು ಮಾರುಕಟ್ಟೆಯಲ್ಲಿ ದೀರ್ಘಕಾಲವಿದ್ದು, ಹಣ ಮಾತ್ರವಲ್ಲದೆ, ಕೋಟಿ-ಬಿಲಿಯನ್ ಕಂಪೆನಿ ಕಟ್ಟಿದ್ದಾರೆ. ಇವರನ್ನ 'RD' ಎಂದು ಕರೆಯುತ್ತಾರೆ. ಯಾವಾಗಲೂ ಬಿಳಿ ಬಟ್ಟೆ ಹಾಕುವುದರಿಂದ 'ಮಿಸ್ಟರ್ ವೈಟ್ ಆ್ಯಂಡ್ ವೈಟ್' ಎಂದೂ ಕರೆಯುತ್ತಾರೆ. 80ರ ದಶಕದಲ್ಲಿ ಕೇವಲ 5,000 ರೂ.ದಿಂದ ಷೇರು ಮಾರುಕಟ್ಟೆಗೆ ಬಂದ ಈ ವ್ಯಕ್ತಿ ಈಗ ಭಾರತದ 8ನೇ ಶ್ರೀಮಂತ ವ್ಯಕ್ತಿ.

ನಾವು ಮಾತನಾಡುವುದು ರಾಧಾಕಿಶನ್ ದಮಾನಿ ಬಗ್ಗೆ. ಬಿಗ್‌ಬುಲ್ ರಾಕೇಶ್ ಜುನ್‌ಜುನ್‌ವಾಲಾ ಕೂಡ ಇವರನ್ನು ಗುರುವೆಂದೇ ಭಾವಿಸಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಯ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾದ ದಮಾನಿ ಚಿಲ್ಲರೆ ಮಾರುಕಟ್ಟೆಯ ದೊಡ್ಡ ಹೆಸರು. ಇವರ ಕಂಪನಿ ಅವೆನ್ಯೂ ಸೂಪರ್‌ಮಾರ್ಟ್ಸ್ ದೇಶದ ದೊಡ್ಡ ನಗರಗಳಲ್ಲಿ ಡಿ-ಮಾರ್ಟ್ ನಡೆಸುತ್ತಿದೆ. ಇದರ ಆರಂಭ 2002ರಲ್ಲಿ ಮುಂಬೈನ ಪವೈ ಪ್ರದೇಶದಲ್ಲಿ ಆಯ್ತು. ಈ ಕಂಪನಿಯ ಮಾರುಕಟ್ಟೆ ಮೌಲ್ಯ 3.25 ಲಕ್ಷ ಕೋಟಿ ರೂ.ಗಿಂತ ಅಧಿಕ. ಇತ್ತೀಚಿನ ಹುರುನ್ ಇಂಡಿಯಾ ಪಟ್ಟಿಯಲ್ಲಿ ಇವರು ದೇಶದ 8ನೇ ಶ್ರೀಮಂತ ವ್ಯಕ್ತಿ. ಇವರ ಆಸ್ತಿ 190,900 ಕೋಟಿ ರೂ. ವರದಿಯ ಪ್ರಕಾರ, ದಮಾನಿ ಈ ಗಳಿಕೆಯನ್ನು ಷೇರು ಮಾರುಕಟ್ಟೆ  ಮತ್ತು ತಮ್ಮ ಕಂಪನಿಯಿಂದ ಮಾಡಿದ್ದಾರೆ.


1985-86ರಲ್ಲಿ, ತಂದೆ ಶಿವಕಿಶನ್ ದಮಾನಿ ಅವರ ಮರಣದ ಬಳಿಕ ಅವರ ಬಾಲ್ ಬೇರಿಂಗ್ ವ್ಯಾಪಾರ ನಷ್ಟದಲ್ಲಿತ್ತು. ಆಗ ರಾಧಾಕಿಶನ್ ಈ ವ್ಯಾಪಾರವನ್ನು ಮುಚ್ಚಿದ್ದರು. ತಂದೆ ಷೇರು ದಲ್ಲಾಳಿಯಾಗಿದ್ದರಿಂದ, ಅವರಿಗೆ ಚಿಕ್ಕಂದಿನಿಂದಲೂ ಮಾರುಕಟ್ಟೆಯ ಪರಿಚಯವಿತ್ತು. ಬಳಿಕ ಸಹೋದರ ಗೋಪಿಕಿಶನ್ ದಮಾನಿರೊಂದಿಗೆ ಸೇರಿ ಷೇರು ಮಾರುಕಟ್ಟೆಯತ್ತ ಗಮನ ಕೇಂದ್ರೀಕರಿಸಿದರು. ಅವರ ಆರಂಭ ಕೇವಲ 5000 ರೂ.ದಿಂದ. 1992ರ ಹರ್ಷದ್ ಮೆಹ್ತಾ ಹಗರಣದಲ್ಲಿ ಅವರಿಗೆ ಭಾರೀ ಲಾಭ ಆಯ್ತು. ಮಾಧ್ಯಮ ವರದಿಗಳ ಪ್ರಕಾರ, ಆಗ ದಮಾನಿ ಹೇಳಿದ್ದ ಮಾತು, 'ಹರ್ಷದ್ ಮೆಹ್ತಾ 7 ದಿನ ತಮ್ಮ ಲಾಂಗ್ ಪೊಸಿಷನ್ ಹೋಲ್ಡ್ ಮಾಡಿದ್ರೆ, ಅವರು ರಸ್ತೆಗೆ ಬರಬೇಕಿತ್ತು, ಏಕೆಂದರೆ ಹರ್ಷದ್ ಮೆಹ್ತಾ ಷೇರು ಮಾರುಕಟ್ಟೆ ಏರಿಕೆ ಮೇಲೆ ಬೆಟ್ಟಿಂಗ್ ಮಾಡಿದ್ರು, ಆದ್ರೆ ನಾನು ಮಾರುಕಟ್ಟೆ ಕುಸಿತದ ಮೇಲೆ. ಹಗರಣ ಬಯಲಾದ ತಕ್ಷಣ ಮಾರುಕಟ್ಟೆ ಕುಸಿಯಿತು, ಇದರಿಂದ ನನಗೆ ಭಾರೀ ಲಾಭ ಆಯ್ತು.'

ದಮಾನಿಗೆ ಹೂಡಿಕೆದಾರರಾಗಿ 1995 ಉತ್ತಮ ವರ್ಷ ಅಂತಾರೆ. ಹೂಡಿಕೆದಾರರು ಸರ್ಕಾರಿ ಬ್ಯಾಂಕ್‌ಗಳಲ್ಲಿ ಹಣ ಹೂಡ್ತಿದ್ರು, ಆದ್ರೆ ದಮಾನಿ ಕಡಿಮೆ ಮೌಲ್ಯದ ಕಂಪನಿಗಳಲ್ಲಿ ದೀರ್ಘಕಾಲ ಇರೋ ಸೂತ್ರ ಅನುಸರಿಸಿ HDFC ಬ್ಯಾಂಕ್‌ನ IPOದಲ್ಲಿ ಹಣ ಹೂಡಿದ್ರು. ಇದರಿಂದ ಅವರು ಭಾರೀ ಲಾಭ ಗಳಿಸಿದ್ರು. ದಮಾನಿ ತುಂಬಾ ಸರಳವಾಗಿ ಬದುಕ್ತಾರೆ. ಅವರು ಹೆಚ್ಚಾಗಿ ಬಿಳಿ ಬಟ್ಟೆ ಹಾಕ್ತಾರೆ. ದೊಡ್ಡ ನಿರ್ಧಾರ ತೆಗೆದುಕೊಳ್ಳೋದಕ್ಕೆ ಮತ್ತು ರಿಸ್ಕ್ ತೆಗೆದುಕೊಳ್ಳೋದಕ್ಕೆ ಹೆಸರುವಾಸಿ. ಎರಡು ದಶಕಗಳಲ್ಲಿ ಅವರು ಹಲವು ಬಾರಿ ರಿಸ್ಕ್ ತೆಗೆದುಕೊಂಡು ತಮ್ಮ ಭವಿಷ್ಯ ಬದಲಾಯಿಸಿಕೊಂಡಿದ್ದಾರೆ. ಮಾರ್ಚ್ 2017ರಲ್ಲಿ ಅವೆನ್ಯೂ ಸೂಪರ್‌ಮಾರ್ಕೆಟ್ IPO ಬಂದಾಗ, ಅವರನ್ನ ದೇಶದ ಚಿಲ್ಲರೆ ರಾಜ ಅಂತ ಕರೆಯಲಾರಂಭಿಸಿದ್ರು. 21 ಮಾರ್ಚ್ 2017ರಂದು ಈ ಕಂಪನಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಆಯ್ತು.

ಡಿ ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ 1954ರಲ್ಲಿ ರಾಜಸ್ಥಾನದ ಬಿಕಾನೇರ್‌ನಲ್ಲಿ ಮಾರ್ವಾಡಿ ಕುಟುಂಬದಲ್ಲಿ ಹುಟ್ಟಿದ್ರು. ಅವರ ಕುಟುಂಬ ಮುಂಬೈನಲ್ಲಿ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಅವರು ಸಸ್ಯಾಹಾರಿ ಆಹಾರ ಸೇವಿಸುತ್ತಾರೆ. ಪ್ರತಿ ಕುಂಭಮೇಳದಲ್ಲಿ ಗಂಗೆಯಲ್ಲಿ ಸ್ನಾನ ಮಾಡ್ತಾರೆ. ಅವರ ಸರಳತೆ ಎಷ್ಟಿದೆ ಅಂದ್ರೆ, ಊಟದ ನಂತರ ಮುಂಬೈ ಚರ್ಚ್‌ಗೇಟ್‌ನಲ್ಲಿರುವ ಚಿಕ್ಕ ಅಂಗಡಿಯಲ್ಲಿ ಪಾನ್ ತಿಂತಾರೆ. 2000ಕ್ಕೂ ಮೊದಲು ದಮಾನಿ ಷೇರು ಮಾರುಕಟ್ಟೆ ವ್ಯಾಪಾರ ಬಿಟ್ಟು ಚಿಲ್ಲರೆ ವ್ಯಾಪಾರಕ್ಕೆ ಬಂದ್ರು.


BREAKING NEWS
Loading latest news...
Join our WhatsApp Channel Powered By : Online Pudu