-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಪಾದಮುಟ್ಟಿ ನಮಸ್ಕರಿಸಲು ಬಂದ ಕಾಂಗ್ರೆಸ್ ಅಭ್ಯರ್ಥಿ‌ - ತಬ್ಬಿ ಆಲಂಗಿಸಿ ಆಶೀರ್ವದಿಸಿದ ಬಿಜೆಪಿ ಸಂಸದ

ಮಂಗಳೂರು: ಪಾದಮುಟ್ಟಿ ನಮಸ್ಕರಿಸಲು ಬಂದ ಕಾಂಗ್ರೆಸ್ ಅಭ್ಯರ್ಥಿ‌ - ತಬ್ಬಿ ಆಲಂಗಿಸಿ ಆಶೀರ್ವದಿಸಿದ ಬಿಜೆಪಿ ಸಂಸದ


ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯವರು ಬಿಜೆಪಿ‌ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಕಂಡು ಪಾದಮುಟ್ಟಿ ನಮಸ್ಕರಿಸಲು ಬಂದಾಗ ನಳಿನ್ ಅವರನ್ನು ತಬ್ಬಿ ಆಲಂಗಿಸಿ ಆಶೀರ್ವದಿಸಿದ ಘಟನೆ ಇಂದು ನಗರದ ಲೇಡಿಹಿಲ್ ಬಳಿಯ ಸಂತ ಅಲೋಶಿಯಸ್ ಶಾಲೆಯ ಮತಗಟ್ಟೆ ಹೊರಗಡೆ ನಡೆದಿದೆ.

ಮಂಗಳೂರು ಲೇಡಿಹಿಲ್ ಅಲೋಶಿಯಸ್ ಶಾಲೆಗೆ ಮತ ಚಲಾಯಿಸಲು ನಳಿನ್ ಕುಮಾರ್ ಕಟೀಲು ಬಂದಿದ್ದರು. ಮತದಾನ ಮುಗಿಸಿ ನಳಿನ್ ಅವರು ಹೊರಗಡೆ ಬಂದ ವೇಳೆ, ಅಲ್ಲಿಯೇ ಇದ್ದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯವರು ನಳಿನ್ ಬಳಿ ಆಗಮಿಸಿ ಅವರ ಕಾಲು ಹಿಡಿದು ಆಶೀರ್ವಾದ ಪಡೆಯಲು ಬಂದಿದ್ದಾರೆ. ಆಗ ನಳಿನ್, ಅವರನ್ನು ಅರ್ಧದಲ್ಲೇ ತಡೆದು ತಬ್ಬಿ ಆಲಂಗಿಸಿ ಆಶೀರ್ವದಿಸಿದ್ದಾರೆ. ಈ ದೃಶ್ಯ ಅಲ್ಲಿಯೇ ಇದ್ದ ಮಾಧ್ಯಮದವರ ಕ್ಯಾಮರಾದಲ್ಲಿ ಸೆರೆಯಾಗಿದೆ.

Ads on article

Advertise in articles 1

advertising articles 2

Advertise under the article

ಸುರ