-->
1000938341
ಜ.20ರಿಂದ 25ರ ವರೆಗೆ ದೇಶದಲ್ಲಿ ಮುಸ್ಲಿಮರು ಪ್ರಯಾಣಿಸಬೇಡಿ: ಸಂಸದ ಅಜ್ಜಲ್ ವಿವಾದಾತ್ಮಕ ಹೇಳಿಕೆ

ಜ.20ರಿಂದ 25ರ ವರೆಗೆ ದೇಶದಲ್ಲಿ ಮುಸ್ಲಿಮರು ಪ್ರಯಾಣಿಸಬೇಡಿ: ಸಂಸದ ಅಜ್ಜಲ್ ವಿವಾದಾತ್ಮಕ ಹೇಳಿಕೆ



ಗುವಹಾಟಿ: ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಉದ್ಘಾಟನೆ ನಿಮಿತ್ತ ಜನರು ದೇಶಾದ್ಯಂತ ಪ್ರಯಾಣಿಸುತ್ತಾರೆ. ಹೀಗಾಗಿ ಜನವರಿ 20ರಿಂದ 25 ರ ವರೆಗೆ ದೇಶದಲ್ಲಿ ಇರುವ ಮುಸ್ಲಿಮರು ಮನೆಯಿಂದ ಹೊರಗೆ ಬರುವುದು ಬೇಡ ಎಂದು ಸಂಸದ ಬದ್ರುದ್ದೀನ್ ಅಜ್ಜಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 


ಅಸ್ಸಾಂನ ಬಾರ್ಪೆಟಾದಲ್ಲಿ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸದ ಸಂದರ್ಭದ ಬಳಿಕ ಉಂಟಾಗಿದ್ದ ಪರಿಸ್ಥಿತಿಯೇ ಮತ್ತೆ ಮರುಕಳಿಸಬಹುದು. ಹಿಂಸಾತ್ಮಕ ಘಟನೆಗಳು ಸಂಭವಿಸಬಹುದು. ಇದರಿಂದಾಗಿ ಸಮುದಾಯದವರನ್ನು ರಕ್ಷಿಸುವ ಕೆಲಸ ಆಗಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 


ಜ. 20ರಿಂದ 25ರ ಅವಧಿಯಲ್ಲಿ ಜನರು ಬಸ್‌ನಲ್ಲಿ ವಿಮಾನದಲ್ಲಿ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಮುಸ್ಲಿಮರು ಯಾರೂ ಮನೆಯಿಂದ ಹೊರಗೆ ಬರುವುದು ಬೇಡ ಎಂದರು. ಬಿಜೆಪಿ ವಿರುದ್ಧ ಹರಿಹಾಯ್ದ ಅವರು, 'ಆ ಪಕ್ಷನಮ್ಮ ಸಮುದಾಯದ ವೈರಿ' ಎಂದು ದೂರಿದರು.

Ads on article

Advertise in articles 1

advertising articles 2

Advertise under the article