-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮೈಸೂರಿನಲ್ಲಿ ಪುತ್ರನ ಆಟವನ್ನು ವೀಕ್ಷಿಸಿದ ರಾಹುಲ್ ದ್ರಾವಿಡ್: ಸರಳತೆಗೆ ಭರಪೂರ ಮೆಚ್ಚುಗೆ

ಮೈಸೂರಿನಲ್ಲಿ ಪುತ್ರನ ಆಟವನ್ನು ವೀಕ್ಷಿಸಿದ ರಾಹುಲ್ ದ್ರಾವಿಡ್: ಸರಳತೆಗೆ ಭರಪೂರ ಮೆಚ್ಚುಗೆ

ಬೆಂಗಳೂರು: ಭಾರತ ಕ್ರಿಕೆಟ್ ನ ಮಾಜಿ ಆಟಗಾರ, ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಹಾಗೂ ಡಾ.ವಿಜೇತಾ ದಂಪತಿ ಶುಕ್ರವಾರ ಮೈಸೂರಿನಲ್ಲಿ ಪುತ್ರ ಸಮಿತ್​ ದ್ರಾವಿಡ್​ ಆಟಕ್ಕೆ ಸಾಕ್ಷಿಯಾದರು.

ಮೈಸೂರಿನ ಮಾನಸಗಂಗೋತ್ರಿಯ ಒಡೆಯರ್​ ಮೈದಾನದಲ್ಲಿ ನಡೆಯುತ್ತಿರುವ 19ರ ವಯೋಮಿತಿಯ ಕೂಚ್​ ಬಿಹಾರ್​ ಟ್ರೋಫಿ ಚತುರ್ದಿನ ಕ್ರಿಕೆಟ್​ ಟೂರ್ನಿಯ ಪಂದ್ಯ ನಡೆಯಿತು. ಉತ್ತರಾಖಂಡದ ಎದುರು ಸಮಿತ್​ ಆತಿಥೇಯ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದು, ಮೊದಲ ದಿನದಾಟದಲ್ಲಿ 5 ಓವರ್​ ಬೌಲಿಂಗ್​ ಮಾಡಿ 11 ರನ್​ ಬಿಟ್ಟುಕೊಟ್ಟರು.

ರಾಷ್ಟ್ರೀಯ ತಂಡದ ಕೋಚ್​ ಎಂಬ ಅಹಂ ಇಲ್ಲದೆ ಓರ್ವ ಸಾಮಾನ್ಯ ಅಪ್ಪನಾಗಿ ದ್ರಾವಿಡ್​ ತಮ್ಮ ಪುತ್ರನ ಆಟವನ್ನು ವೀಕ್ಷಿಸಿ ಆನಂದಿಸಿದರು. ಸರಳವಾಗಿ ಮೈದಾನದ ಮೆಟ್ಟಿಲ ಮೇಲೆ ಕುಳಿತು ಪಂದ್ಯ ವೀಕ್ಷಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರ ಸರಳತೆಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article

ಸುರ