-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಯುಗಾದಿ ಹಬ್ಬದ ಮಾಂಸದೂಟ- ಹಲಾಲ್ ಕಟ್ ಬಹಿಷ್ಕರಿಸಲು ಮತ್ತೆ ಮುತಾಲಿಕ್ ಕರೆ

ಯುಗಾದಿ ಹಬ್ಬದ ಮಾಂಸದೂಟ- ಹಲಾಲ್ ಕಟ್ ಬಹಿಷ್ಕರಿಸಲು ಮತ್ತೆ ಮುತಾಲಿಕ್ ಕರೆ


ಮಂಗಳೂರು: ಕಳೆದ ಬಾರಿ ಯುಗಾದಿಯಂತೆ ಈ ಬಾರಿಯೂ ಜಟ್ಕಾ ಕಟ್ ಮುಂದುವರಿಸಿ - ಹಲಾಲ್ ಕಟ್ ಬಹಿಷ್ಕರಿಸಿ ಅಭಿಯಾನ ನಡೆಸುತ್ತೇವೆ ಎಂದು ಪ್ರಮೋದ್ ಮೊತಾಲಿಕ್ ಹೇಳಿದರು.

ಕಳೆದ ಬಾರಿಯ ಯುಗಾದಿಯ ವೇಳೆಗೆ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡಿದ್ದೆವು. ಈ ಬಾರಿಯೂ ಅಭಿಯಾನವನ್ನು ಮುಂದುವರಿಸುತ್ತಿದ್ದೇವೆ.‌ ಹಲಾಲ್ ಕಟ್ ಇಸ್ಲಾಂಗೆ ಸಂಬಂಧಿಸಿದ್ದು ಹೊರತು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದೂಗಳ ಜಟ್ಕಾಕಟ್ ಮಾಡಿರುವ ಮಾಂಸವನ್ನು ತಿನ್ನೋದಿಲ್ಲ. ಹಾಗಾದರೆ ನಾವೇಕೆ ಅವರ ಹಲಾಲ್ ಮಾಂಸವನ್ನು ತಿನ್ನಬೇಕು ಎಂದರು.

ಹಲಾಲ್ ಕಟ್ ನಿಂದ ಜಲಾಮ್-ಉಲೇಮಾ ಟ್ರಸ್ಟ್ ಗೆ ಎರಡು ಲಕ್ಷ ಕೋಟಿ ರೂ. ಆದಾಯವಿದೆ.‌ ಈ ಹಲಾಲ್ ನ ದುಡ್ಡು ಟೆರರಿಸ್ಟ್ ಗಳಿಗೆ ಸಂದಾಯವಾಗುತ್ತದೆ. ಮಂಡ್ಯದಲ್ಲಿ ಹಿಜಾಬ್ ಪ್ರತಿಭಟನೆ ವೇಳೆ 'ಅಲ್ಲಾಹು ಅಕ್ಬರ್' ಎಂದು ಕೂಗಿದ ವಿದ್ಯಾರ್ಥಿನಿಗೆ ಇದೇ ಟ್ರಸ್ಟ್ ಐದು ಲಕ್ಷ ರೂ. ನೀಡಿದೆ. ರಾಜ್ಯದಲ್ಲಿ ನಡೆದಿರುವ ಹಲವು ಗಲಭೆಯ ಹಿಂದೆ ಹಲಾಲ್ ನ ಹಣವಿದೆ.‌ ಹಲಾಲ್ ಸೇವಿಸಿ ಹಿಂದೂಗಳ ವಿರುದ್ಧ ಹಿಂದೂಗಳೇ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಪ್ರಮೋದ್ ಮೊತಾಲಿಕ್ ಹೇಳಿದರು.

Ads on article

Advertise in articles 1

advertising articles 2

Advertise under the article