![ಶಿರಾಡಿಯಲ್ಲಿ ಸುರಂಗ ಬೇಡ, ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆ: ನಳಿನ್ಗೆ ಗಡ್ಕರ್ ಅಭಯ ಶಿರಾಡಿಯಲ್ಲಿ ಸುರಂಗ ಬೇಡ, ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆ: ನಳಿನ್ಗೆ ಗಡ್ಕರ್ ಅಭಯ](https://blogger.googleusercontent.com/img/b/R29vZ2xl/AVvXsEjlpBMzqLQ6CeFxCjCwXK9bDFnPRx0o4JPzWsRIzfiRqlmnm_Dc5r4B3Y50NSvbbTi5-Y1D0ijgV6C_PUDqxz3Wfx0H1tOv3D6N6sqI7lbznHAbnjWy-q4cZYee5BPSydikLfR5wVRilN82GaYnCeT6SgQ99RZpVig8wlUQtj2b5d4bIRiosdZzxsy4/w640-h640/Nalin.jpg)
ಶಿರಾಡಿಯಲ್ಲಿ ಸುರಂಗ ಬೇಡ, ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆ: ನಳಿನ್ಗೆ ಗಡ್ಕರ್ ಅಭಯ
ಶಿರಾಡಿಯಲ್ಲಿ ಸುರಂಗ ಬೇಡ, ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆ: ನಳಿನ್ಗೆ ಗಡ್ಕರ್ ಅಭಯ
ಕರಾವಳಿ ಜನರ ಬಹುದಿನಗಳ ಬೇಡಿಕೆಯಾದ ಶಿರಾಡಿಯಲ್ಲಿ ಸುರಂಗ ಹೆದ್ದಾರಿ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಶಿರಾಟಿ ಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ದೊಡ್ಡ ಬಜೆಟ್ ಬೇಕಾಗುತ್ತದೆ. ಜೊತೆಗೆ ಅದು ಕಾರ್ಯಸಾಧುವಲ್ಲ ಎಂದು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಮ್ಮ ನಿರ್ಧಾರಕ್ಕೆ ಸಮಜಾಯಿಸಿ ನೀಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ ಗಡ್ಕರಿ, ಶಿರಾಡಿ ಘಾಟ್ನಲ್ಲಿ ವಾಹನ ದಟ್ಟಣೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಆ ಕಾರಣ, ಈಗ ಇರುವ ದ್ವಿಪಥವನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ಸಿದ್ದಪಡಿಸಲಾಗುವುದು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮಾಲೋಚಕರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ
PTCL Act- ಎಸ್ಸಿ ಎಸ್ಟಿ ಜಮೀನು ಪರಭಾರೆ: ಸರ್ಕಾರದಿಂದ ನೂತನ ಸುತ್ತೋಲೆ (28/09/2021)
PTCL Act | DC ಮಟ್ಟದಲ್ಲೇ SC, ST ಜಾಗ ಭೂ ಪರಿವರ್ತನೆ/ಮಾರಾಟ: ಪೂರ್ವಾನುಮತಿ ಬಗ್ಗೆ ಸರ್ಕಾರದ ಮಹತ್ವದ ಸುತ್ತೋಲೆ
SC ST ಜಮೀನು ಮಾರಾಟ: ಕಾನೂನಾತ್ಮಕ ವಾರಿಸುದಾರರ ಅರ್ಜಿ ಮಾತ್ರ ಪರಿಗಣನೆ: ಕರ್ನಾಟಕ ಹೈಕೋರ್ಟ್