-->

ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ 2,500 ವರ್ಷ ಪೂರ್ವದ ಸಂಸ್ಕೃತದ ವ್ಯಾಕರಣದ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ

ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ 2,500 ವರ್ಷ ಪೂರ್ವದ ಸಂಸ್ಕೃತದ ವ್ಯಾಕರಣದ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ

ನ್ಯೂಯಾರ್ಕ್: ಕ್ರಿ.ಪೂ.5ನೇ ಶತಮಾನದಲ್ಲಿ ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ ಸಂಸ್ಕೃತದ ವ್ಯಾಕರಣ ಜಠಿಲತೆಯನ್ನು ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿವಿಯಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿ ಬಗೆಹರಿಸುವ ಮೂಲಕ ಎಲ್ಲರನ್ನೂ ಹುಬ್ಬೇರಿಸಿದ್ದಾರೆ.

ರಿಷಿ ಅತುಲ್ ರಾಜ್‌ಪೋಪಟ್ (27) ಎಂಬವರು 2,500 ವರ್ಷಗಳ ಹಿಂದೆ ಬದುಕಿದ್ದ ಪ್ರಾಚೀನ ಸಂಸ್ಕೃತದ ಪಾರಂಗತ ಪಾಣಿನಿಯ ಸಂಸ್ಕೃತ ಬರವಣಿಗೆಯ ಗೂಢಾರ್ಥವನ್ನು ಬಿಡಿಸಿ ತಜ್ಞರ ಗಮನ ಸೆಳೆದಿದ್ದಾನೆಂದು ಬಿಬಿಸಿ ವರದಿ ಮಾಡಿದೆ. ಅಂದಹಾಗೆ ರಿಷಿ ಅತುಲ್ ರಾಜ್‌ಪೋಪಟ್ ಕೇಂಬ್ರಿಡ್ಜ್‌ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಏಷ್ಯನ್ ಮತ್ತು ಮಧ್ಯಪ್ರಾಚ್ಯ ಅಧ್ಯಯನಗಳ ವಿಭಾಗದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾರೆ.

ಪಾಣಿನಿಯು ಒಂದು "ಮೆಟಾರೂಲ್” ಅನ್ನು ಕಲಿಸಿದ್ದನು. “ಸಮಾನ ಸಾಮರ್ಥ್ಯದ ಎರಡು ನಿಯಮಗಳ ಮಧ್ಯೆಯಿರುವ ಸಂಘರ್ಷದ ಸಂದರ್ಭದಲ್ಲಿ, ವ್ಯಾಕರಣದ ಸರಣಿ ಕ್ರಮದಲ್ಲಿ ಬಳಿಕ ಬರುವ ನಿಯಮವು ಗೆಲ್ಲುತ್ತದೆ” ಎಂದು ಸಾಂಪ್ರದಾಯಿಕವಾಗಿ ವಿದ್ವಾಂಸರು ಮೆಟಾರೂಲ್ ಅನ್ನು ಅರ್ಥೈಸಿದ್ದರು. ಆದಾಗ್ಯೂ, ಇದು ಸಾಮಾನ್ಯವಾಗಿ ವ್ಯಾಕರಣದ ತಪ್ಪು ಫಲಿತಾಂಶಗಳಿಗೆ ಕಾರಣವಾಯಿತು.

ಮೆಟಾರೂಲ್‌ನ ಈ ಸಾಂಪ್ರದಾಯಿಕ ವ್ಯಾಖ್ಯಾನವನ್ನು ರಾಜ್‌ಪೋಪಟ್ ತಿರಸ್ಕರಿಸಿದ್ದು ಮೆಟಾರೂಲ್ ಅಂದರೆ, ಪದದ ಎಡ ಮತ್ತು ಬಲ ಬದಿಗಳಿಗೆ ಅನುಕ್ರಮವಾಗಿ ಅನ್ವಯವಾಗುವ ನಿಯಮಗಳ ನಡುವೆ, ಬಲಭಾಗಕ್ಕೆ ಅನ್ವಯವಾಗುವ ನಿಯಮವನ್ನು ನಾವು ಆರಿಸಬೇಕೆಂದು ಪಾಣಿನಿ ಬಯಸಿದ್ದರು. ಪಾಣಿನಿ ಅವರ “ಭಾಷಾ ಯಂತ್ರ'ವು ವ್ಯಾಕರಣದ ಸರಿಯಾದ ಪದಗಳನ್ನು ಯಾವುದೇ ವಿನಾಯಿತಿಗಳಿಲ್ಲದೆ ಉತ್ಪಾದಿಸುತ್ತದೆ ಆ ಎಂದು ರಾಜ್‌ಪೋಪಟ್ ತೀರ್ಮಾನಿಸಿದರು.

ಈ ಬಗ್ಗೆ ಮಾತನಾಡಿದ ರಿಷಿ ಅತುಲ್ ರಾಜ್‌ಪೋಪಟ್, 'ನಾನು ಕೇಂಬ್ರಿಡ್ಜ್‌ನಲ್ಲಿ ಯುರೇಕಾ ಕ್ಷಣ (ಹಠ ವಿಜಯೋತ್ಸಾಹದ ಆವಿಷ್ಕಾರ, ಸ್ಫೂರ್ತಿ ಅಥವಾ ಒಳನೋಟದ ಕ್ಷಣ) ವನ್ನು ಹೊಂದಿದ್ದೇನೆ. 9 ತಿಂಗಳುಗಳ ಕಾಲ ಈ ಸಮಸ್ಯೆಯನ್ನು ಭೇದಿಸಲು ಸಾಕಷ್ಟು ಪ್ರಯತ್ನಿಸಿದ್ದೇನೆ. ಬಳಿಕ ಅದನ್ನು ಬಿಟ್ಟು ಬಿಡಬೇಕೆಂದು ಬಹುತೇಕ ಸಿದ್ಧನಾಗಿದ್ದೆ, ಈ ವೇಳೆ ತುಂಬಾ ಗೊಂದಲಕ್ಕೊಳಗಾಗಿದ್ದೆ. ಹೀಗಾಗಿ ನಾನು ಒಂದು ತಿಂಗಳು ಪುಸ್ತಕಗಳನ್ನು ಮುಚ್ಚಿ ಬೇಸಿಗೆ ರಜೆ, ಈಜು, ಸೈಕ್ಲಿಂಗ್, ಅಡುಗೆ, ಪ್ರಾರ್ಥನೆ ಮತ್ತು ಧ್ಯಾನ ಮಾಡುತ್ತಾ ಆನಂದದ ಸಮಯ ಕಳೆಯುತ್ತಿದೆ. ನಂತರ ನಿರಾಶೆಯಿಂದ ನಾನು ಕೆಲಸಕ್ಕೆ ಮರಳಿದೆ. ಆ ಬಳಿಕ ನಾನು ಪುಟಗಳನ್ನು ತಿರುಗಿಸಿದಂತೆ ಈ ಮೆಟಾರೂಲ್ ಮಾದರಿಗಳು ಕಾಣಿಸಲು ಪ್ರಾರಂಭಿಸಿದವು ಮತ್ತು ಕೊಂಚ ಅರ್ಥವಾಗಲು ಆರಂಭವಾಯಿತು. ಇದಾದ ಬಳಿಕವೂ ಸಮಸ್ಯೆ ಪರಿಹರಿಸಲು ಎರಡು ವರ್ಷಗಳು ಬೇಕಾಯಿತು ಎಂದು ರಾಜ್‌ಪೋಪಟ್ ಹೇಳಿದ್ದಾರೆ.

ಈ ಸುದ್ದಿಯಿಂದ ಬಹಳ ಸಂತಸಗೊಂಡಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರೊ.ವರ್ಗಿಯಾನಿ, “ನನ್ನ ವಿದ್ಯಾರ್ಥಿ ರಿಷಿ ಸಮಸ್ಯೆಯನ್ನು ಭೇದಿಸಿದ್ದಾರೆ. ಇದನ್ನು ಭೇದಿಸಲು ಶತಮಾನಗಳಿಂದ ವಿದ್ವಾಂಸರು ಕೂಡ ಗೊಂದಲಕ್ಕೀಡಾಗಿದ್ದರು. ಈ ಸಮಸ್ಯೆಗೆ ರಿಷಿ ಅಸಾಧಾರಣವಾದ ಹಾಗೂ ಸೊಗಸಾದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಈ ಆವಿಷ್ಕಾರವು ಭಾಷೆಯಲ್ಲಿ ಆಸಕ್ತಿ ಹೊಂದಿರುವ ಸಮಯದಲ್ಲಿ ಸಂಸ್ಕೃತದ ಅಧ್ಯಯನವನ್ನು ಇನ್ನಷ್ಟು ಕ್ರಾಂತಿಗೊಳಿಸುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತದಲ್ಲಿ ಒಂದು ಶತಕೋಟಿಗೂ ಹೆಚ್ಚು ಜನಸಂಖ್ಯೆಯಲ್ಲಿ ಅಂದಾಜು 25,000 ಜನರು ಮಾತ್ರ ಸಂಸ್ಕೃತವನ್ನು ಮಾತನಾಡುತ್ತಾರೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಹೇಳಿದೆ.

Ads on article

Advertise in articles 1

advertising articles 2

Advertise under the article